<p><strong>ನವದೆಹಲಿ: </strong>ಆಡಳಿತಗಾರರು ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಇತ್ತದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಮಧ್ಯೆ ಆಗಸ್ಟ್ ವೇಳೆಗೆ ಸ್ಪರ್ಧಾತ್ಮಕ ಕ್ರೀಡೆಗಳು ಆರಂಭವಾಗುವವೇ ಎಂಬ ಚರ್ಚೆ ಕಾವು ಪಡೆದಿದೆ.</p>.<p>ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕಳೆದ ವಾರ ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್)ಗಳ ಪ್ರತಿನಿಧಿಗಳೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದರು. ಆಗಸ್ಟ್ನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೇಕ್ಷಕರ ನಿರ್ಬಂಧದೊಡನೆ ಆರಂಭಿಸುವ ಗುರಿ ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದರು.</p>.<p>ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಿಂದತರಬೇತಿ ಹಾಗೂ ಸ್ಪರ್ಧೆಗಳ ವೇಳಾಪಟ್ಟಿ ಸಿದ್ಧಪಡಿಸಲುಭಾರತ ಒಲಿಂಪಿಕ್ ಸಂಸ್ಥೆಯೇನೊ ಮುತುವರ್ಜಿ ವಹಿಸಿದೆ. ಆದರೆ ಕ್ರೀಡಾಂಗಣಕ್ಕೆ ಇಳಿಯುವ ಅಥ್ಲೀಟುಗಳ ಕಥೆ ಏನು? ಎಂಬ ಪ್ರಶ್ನೆಗೆ ಉತ್ತರ ಹೊಳೆದಿಲ್ಲ.</p>.<p>ಈ ಬಗ್ಗೆ ಪಿಟಿಐ ವಿವಿಧ ಕ್ರೀಡೆಗಳ ಪ್ರಮುಖ ತಾರೆಗಳನ್ನು ಸಂಪರ್ಕಿಸಿದಾಗ ಕೆಲವರು ಇನ್ನಷ್ಟು ದಿನ ಕಾಯುವ ಕುರಿತು ಒಲವು ವ್ಯಕ್ತಪಡಿಸಿದರೆ, ಇನ್ನು ಕೆಲವರು ಫಿಟ್ನೆಸ್ ಹಾಗೂ ಸಿದ್ಧತೆಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಸ್ಪರ್ಧೆಗಳನ್ನು ಪುನರಾರಂಭಿಸುವ ಚರ್ಚೆ ಆರಂಭಿಸುವ ಮೊದಲು ಕೊರೊನಾ ಸೋಂಕು ಬಾಧೆಯನ್ನು ನಿಯಂತ್ರಣಕ್ಕೆ ತರಬೇಕು. ಭಾರತದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಸದ್ಯ ಇದಕ್ಕೆ ಲಸಿಕೆಯೂ ಸಿಗುವಂತೆ ಕಾಣುತ್ತಿಲ್ಲ’ ಎಂದು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.</p>.<p>‘ಸ್ಪರ್ಧೆಯ ವೇಳೆ ಅಥ್ಲೀಟ್ ಒಬ್ಬ ಸೋಂಕಿಗೆ ಒಳಗಾಗಿ ಇತರರೂ ಅಪಾಯಕ್ಕೆ ಸಿಲುಕಿದರೆ ಅದಕ್ಕೆ ಹೊಣೆ ಯಾರು? ನಾವು ಜೀವಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದಕ್ಕೆ ಅಂಕುಶ ಹಾಕುವುದು ಹೇಗೆಂದು ಯಾರಿಗೂ ತಿಳಿಯುತ್ತಿಲ್ಲ’ ಎಂದು ಕಾಂಗ್ರೆಸ್ ಸದಸ್ಯರೂ ಆಗಿರುವ ವಿಜೇಂದರ್ ಅಭಿಪ್ರಾಯಪಟ್ಟರು.</p>.<p>ವಿಜೇಂದರ್ ಆತಂಕಕ್ಕೆ ಕಾರಣಗಳಿವೆ. ಇತ್ತೀಚೆಗೆ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್, ಪಾಕಿಸ್ತಾನದ 10 ಮಂದಿ ಕ್ರಿಕೆಟ್ ಆಟಗಾರರು ಹಾಗೂ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಟೆನಿಸ್ ಟೂರ್ನಿ ವೇಳೆ ಅಂತರ ಕಾಪಾಡುವ ಗೋಜಿಗೂ ಹೋಗಿರಲಿಲ್ಲ.</p>.<p>ಇನ್ನೊಂದೆಡೆ ಬಜರಂಗ್ ಪೂನಿಯಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಲಾಕ್ಡೌನ್ ಜಾರಿಯಾದಾಗಿನಿಂದ ಅಥ್ಲೀಟುಗಳು ತಮ್ಮ ಮನೆಯಲ್ಲೇ ಬಂದಿಯಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಅವರು ಫಿಟ್ನೆಸ್ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮ ಕೆಟ್ಟದಾಗಿರುತ್ತದೆ’ ಎಂದು ವಿಶ್ವ ಕುಸ್ತಿಯಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಬಜರಂಗ್ ನುಡಿಯುತ್ತಾರೆ.</p>.<p>ಆದರೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಿಂದ ಕ್ರೀಡಾಚಟುವಟಿಕೆಗಳ ಪುನರಾರಂಭಕ್ಕೆ ಅಡ್ಡಿಯಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.</p>.<p>ಕೇಂದ್ರ ಸರ್ಕಾರವು ಹೊರಾಂಗಣ ಅಭ್ಯಾಸಕ್ಕೆ ಸಮ್ಮತಿ ಸೂಚಿಸಿದೆ. ಆದರೆ ರಾಜ್ಯ ಸರ್ಕಾರಗಳು ವಿವಿಧ ಹಂತದ ನಿರ್ಬಂಧಗಳನ್ನು ವಿಧಿಸಿವೆ. ಬಾಕ್ಸಿಂಗ್ ಹಾಗೂ ಬ್ಯಾಡ್ಮಿಂಟನ್ ಫೆಡರೇಷನ್ಗಳು ತರಬೇತಿಯನ್ನು ಪುನರಾರಂಭಿಸಲು ಅನುಮತಿ ಕೇಳುತ್ತಿವೆ.</p>.<p>ಟೇಬಲ್ ಟೆನಿಸ್ ಫೆಡರೇಷನ್ ತರಬೇತಿ ಪುನರಾರಂಭಕ್ಕೆ ಪ್ರಯತ್ನಿಸುತ್ತಿದೆ. ಆದರೆ ಆಟಗಾರರ ಮನವೊಲಿಸುವಲ್ಲಿ ಅದಕ್ಕೆ ಸಾಧ್ಯವಾಗಿಲ್ಲ.</p>.<p>ಭಾರತದ 15 ಮಂದಿ ಶೂಟರ್ಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ತರಬೇತಿ ಆರಂಭಕ್ಕೆ ಅವರು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಮುಂದುವರಿಯಲು ಅವರು ಬಯಸಿದ್ದಾರೆ.</p>.<p>‘ಇಂತಹ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸುವುದು ಸಮಂಜಸವಲ್ಲ. ಅಪಾಯ ಇದ್ದೇ ಇರುತ್ತದೆ. ಶೂಟಿಂಗ್ ವಿಷಯಕ್ಕೆ ಬಂದರೆ 5–6 ಮಂದಿಯ ಬ್ಯಾಚ್ ಮಾಡಿಕೊಂಡು ತರಬೇತಿ ನಡೆಸಬಹುದು’ ಎಂದು ವಿಶ್ವಕಪ್ ಹಾಗೂ ಕಾಮನ್ವೆಲ್ತ್ ಪದಕ ವಿಜೇತ ಶೂಟರ್ ಸಂಜೀವ್ ರಜಪೂತ್ ಹೇಳಿದ್ದಾರೆ.</p>.<p>ಬ್ಯಾಡ್ಮಿಂಟನ್ ಆಟಗಾರರಾದ ಪರುಪಳ್ಳಿ ಕಶ್ಯಪ್, ಬಿ.ಸಾಯಿ ಪ್ರಣೀತ್, ವೇಟ್ಲಿಫ್ಟರ್ ಮೀರಾಬಾಯಿ ಚಾನು, ಆರ್ಚರಿ ಪಟು ದೀಪಿಕಾ ಕುಮಾರಿ, ಈಜುಪಟು ಶ್ರೀ ಹರಿ ನಟರಾಜ್ ಹಾಗೂ ಚೆಸ್ ಆಟಗಾರ್ತಿ ದ್ರೋಣವಳ್ಳಿ ಹರಿಕಾ ಅವರು ಕ್ರೀಡೆ ಪುನರಾರಂಭದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ಆರಂಭವಾದರೆ ಅಥ್ಲೀಟುಗಳ ಆಯ್ಕೆ ತುಂಬಾ ಸೀಮಿತವಾಗಿರುತ್ತದೆ’ ಎಂದು ಮೀರಾಬಾಯಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಆಡಳಿತಗಾರರು ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಇತ್ತದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಮಧ್ಯೆ ಆಗಸ್ಟ್ ವೇಳೆಗೆ ಸ್ಪರ್ಧಾತ್ಮಕ ಕ್ರೀಡೆಗಳು ಆರಂಭವಾಗುವವೇ ಎಂಬ ಚರ್ಚೆ ಕಾವು ಪಡೆದಿದೆ.</p>.<p>ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕಳೆದ ವಾರ ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್)ಗಳ ಪ್ರತಿನಿಧಿಗಳೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದರು. ಆಗಸ್ಟ್ನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೇಕ್ಷಕರ ನಿರ್ಬಂಧದೊಡನೆ ಆರಂಭಿಸುವ ಗುರಿ ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದರು.</p>.<p>ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಿಂದತರಬೇತಿ ಹಾಗೂ ಸ್ಪರ್ಧೆಗಳ ವೇಳಾಪಟ್ಟಿ ಸಿದ್ಧಪಡಿಸಲುಭಾರತ ಒಲಿಂಪಿಕ್ ಸಂಸ್ಥೆಯೇನೊ ಮುತುವರ್ಜಿ ವಹಿಸಿದೆ. ಆದರೆ ಕ್ರೀಡಾಂಗಣಕ್ಕೆ ಇಳಿಯುವ ಅಥ್ಲೀಟುಗಳ ಕಥೆ ಏನು? ಎಂಬ ಪ್ರಶ್ನೆಗೆ ಉತ್ತರ ಹೊಳೆದಿಲ್ಲ.</p>.<p>ಈ ಬಗ್ಗೆ ಪಿಟಿಐ ವಿವಿಧ ಕ್ರೀಡೆಗಳ ಪ್ರಮುಖ ತಾರೆಗಳನ್ನು ಸಂಪರ್ಕಿಸಿದಾಗ ಕೆಲವರು ಇನ್ನಷ್ಟು ದಿನ ಕಾಯುವ ಕುರಿತು ಒಲವು ವ್ಯಕ್ತಪಡಿಸಿದರೆ, ಇನ್ನು ಕೆಲವರು ಫಿಟ್ನೆಸ್ ಹಾಗೂ ಸಿದ್ಧತೆಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಸ್ಪರ್ಧೆಗಳನ್ನು ಪುನರಾರಂಭಿಸುವ ಚರ್ಚೆ ಆರಂಭಿಸುವ ಮೊದಲು ಕೊರೊನಾ ಸೋಂಕು ಬಾಧೆಯನ್ನು ನಿಯಂತ್ರಣಕ್ಕೆ ತರಬೇಕು. ಭಾರತದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಸದ್ಯ ಇದಕ್ಕೆ ಲಸಿಕೆಯೂ ಸಿಗುವಂತೆ ಕಾಣುತ್ತಿಲ್ಲ’ ಎಂದು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.</p>.<p>‘ಸ್ಪರ್ಧೆಯ ವೇಳೆ ಅಥ್ಲೀಟ್ ಒಬ್ಬ ಸೋಂಕಿಗೆ ಒಳಗಾಗಿ ಇತರರೂ ಅಪಾಯಕ್ಕೆ ಸಿಲುಕಿದರೆ ಅದಕ್ಕೆ ಹೊಣೆ ಯಾರು? ನಾವು ಜೀವಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದಕ್ಕೆ ಅಂಕುಶ ಹಾಕುವುದು ಹೇಗೆಂದು ಯಾರಿಗೂ ತಿಳಿಯುತ್ತಿಲ್ಲ’ ಎಂದು ಕಾಂಗ್ರೆಸ್ ಸದಸ್ಯರೂ ಆಗಿರುವ ವಿಜೇಂದರ್ ಅಭಿಪ್ರಾಯಪಟ್ಟರು.</p>.<p>ವಿಜೇಂದರ್ ಆತಂಕಕ್ಕೆ ಕಾರಣಗಳಿವೆ. ಇತ್ತೀಚೆಗೆ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್, ಪಾಕಿಸ್ತಾನದ 10 ಮಂದಿ ಕ್ರಿಕೆಟ್ ಆಟಗಾರರು ಹಾಗೂ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಟೆನಿಸ್ ಟೂರ್ನಿ ವೇಳೆ ಅಂತರ ಕಾಪಾಡುವ ಗೋಜಿಗೂ ಹೋಗಿರಲಿಲ್ಲ.</p>.<p>ಇನ್ನೊಂದೆಡೆ ಬಜರಂಗ್ ಪೂನಿಯಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಲಾಕ್ಡೌನ್ ಜಾರಿಯಾದಾಗಿನಿಂದ ಅಥ್ಲೀಟುಗಳು ತಮ್ಮ ಮನೆಯಲ್ಲೇ ಬಂದಿಯಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಅವರು ಫಿಟ್ನೆಸ್ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮ ಕೆಟ್ಟದಾಗಿರುತ್ತದೆ’ ಎಂದು ವಿಶ್ವ ಕುಸ್ತಿಯಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಬಜರಂಗ್ ನುಡಿಯುತ್ತಾರೆ.</p>.<p>ಆದರೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಿಂದ ಕ್ರೀಡಾಚಟುವಟಿಕೆಗಳ ಪುನರಾರಂಭಕ್ಕೆ ಅಡ್ಡಿಯಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.</p>.<p>ಕೇಂದ್ರ ಸರ್ಕಾರವು ಹೊರಾಂಗಣ ಅಭ್ಯಾಸಕ್ಕೆ ಸಮ್ಮತಿ ಸೂಚಿಸಿದೆ. ಆದರೆ ರಾಜ್ಯ ಸರ್ಕಾರಗಳು ವಿವಿಧ ಹಂತದ ನಿರ್ಬಂಧಗಳನ್ನು ವಿಧಿಸಿವೆ. ಬಾಕ್ಸಿಂಗ್ ಹಾಗೂ ಬ್ಯಾಡ್ಮಿಂಟನ್ ಫೆಡರೇಷನ್ಗಳು ತರಬೇತಿಯನ್ನು ಪುನರಾರಂಭಿಸಲು ಅನುಮತಿ ಕೇಳುತ್ತಿವೆ.</p>.<p>ಟೇಬಲ್ ಟೆನಿಸ್ ಫೆಡರೇಷನ್ ತರಬೇತಿ ಪುನರಾರಂಭಕ್ಕೆ ಪ್ರಯತ್ನಿಸುತ್ತಿದೆ. ಆದರೆ ಆಟಗಾರರ ಮನವೊಲಿಸುವಲ್ಲಿ ಅದಕ್ಕೆ ಸಾಧ್ಯವಾಗಿಲ್ಲ.</p>.<p>ಭಾರತದ 15 ಮಂದಿ ಶೂಟರ್ಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ತರಬೇತಿ ಆರಂಭಕ್ಕೆ ಅವರು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಮುಂದುವರಿಯಲು ಅವರು ಬಯಸಿದ್ದಾರೆ.</p>.<p>‘ಇಂತಹ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸುವುದು ಸಮಂಜಸವಲ್ಲ. ಅಪಾಯ ಇದ್ದೇ ಇರುತ್ತದೆ. ಶೂಟಿಂಗ್ ವಿಷಯಕ್ಕೆ ಬಂದರೆ 5–6 ಮಂದಿಯ ಬ್ಯಾಚ್ ಮಾಡಿಕೊಂಡು ತರಬೇತಿ ನಡೆಸಬಹುದು’ ಎಂದು ವಿಶ್ವಕಪ್ ಹಾಗೂ ಕಾಮನ್ವೆಲ್ತ್ ಪದಕ ವಿಜೇತ ಶೂಟರ್ ಸಂಜೀವ್ ರಜಪೂತ್ ಹೇಳಿದ್ದಾರೆ.</p>.<p>ಬ್ಯಾಡ್ಮಿಂಟನ್ ಆಟಗಾರರಾದ ಪರುಪಳ್ಳಿ ಕಶ್ಯಪ್, ಬಿ.ಸಾಯಿ ಪ್ರಣೀತ್, ವೇಟ್ಲಿಫ್ಟರ್ ಮೀರಾಬಾಯಿ ಚಾನು, ಆರ್ಚರಿ ಪಟು ದೀಪಿಕಾ ಕುಮಾರಿ, ಈಜುಪಟು ಶ್ರೀ ಹರಿ ನಟರಾಜ್ ಹಾಗೂ ಚೆಸ್ ಆಟಗಾರ್ತಿ ದ್ರೋಣವಳ್ಳಿ ಹರಿಕಾ ಅವರು ಕ್ರೀಡೆ ಪುನರಾರಂಭದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ಆರಂಭವಾದರೆ ಅಥ್ಲೀಟುಗಳ ಆಯ್ಕೆ ತುಂಬಾ ಸೀಮಿತವಾಗಿರುತ್ತದೆ’ ಎಂದು ಮೀರಾಬಾಯಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>