<p><strong>ಬೆಂಗಳೂರು: </strong>ಕರ್ನಾಟಕದ ಸೂರಜ್ ಪ್ರಬೋಧ್, ರಿಷಿ ರೆಡ್ಡಿ ಮಮತ್ತು ಆದಿಲ್ ಕಲ್ಯಾಣ್ಪುರಿ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಆತಿಥ್ಯದಲ್ಲಿ ನಡೆಯುತ್ತಿರುವ ಐಟಿಎಫ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತುಗಳಲ್ಲಿ ಮುನ್ನಡೆದರು.</p>.<p>ಕೆಎಸ್ಎಲ್ಟಿಎ ಅಂಗಣದಲ್ಲಿ ಭಾನುವಾರ ಆರಂಭವಾದ ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಸೂರಜ್6-4, 6-2ರಿಂದ ಶ್ರೀಲಂಕಾದ ಚಾತುರ್ಯ ನೀಲವೀರ ಅವರ ಸವಾಲು ಮೀರಿದರೆ, ಆದಿಲ್ ಅವರಿಗೆ 6-1, 6-2ರಿಂದ ಥಾಯ್ಲೆಂಡ್ನ ವೊರೊವಿನ್ ಕುಂಥೊನ್ಕಿಟ್ಟಿಕುಲ್ ವಿರುದ್ಧ ಜಯ ಒಲಿಯಿತು. ಮತ್ತೊಂದು ಹಣಾಹಣಿಯಲ್ಲಿ ರಿಷಿ6-3, 7-5ರಿಂದ ಈಜಿಪ್ಟ್ನ ಅಕ್ರಂ ಎಲ್ ಸಲಾರಿ ಅವರನ್ನು ಪರಾಭವಗೊಳಿಸಿದರು.</p>.<p>ಮೊದಲ ಸುತ್ತನ ಮತ್ತೊಂದು ಸೆಣಸಾಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಕರಣ್ ಸಿಂಗ್6-1, 6-0ರಿಂದ ಮತ್ತೊಬ್ಬ ಶ್ರೀಲಂಕಾ ಆಟಗಾರ ಥೆಹಾನ್ ಸಂಜಯ ವಿರುದ್ಧ ಗೆದ್ದರು. ಅರ್ಹತಾ ಸುತ್ತಿನಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಭಾರತದ ದೇವ್ ಜಾವಿಯಾ ಅವರು7-5, 6-2ರಿಂದ ಭಾರತದವರೇ ಆದ ಅರ್ನಾವ್ ಪತಂಗೆ ಅವರನ್ನು ಸೋಲಿಸಿ ಮುನ್ನಡೆದರು.</p>.<p>ಮೊದಲ ಸುತ್ತಿನ ಅರ್ಹತಾ ಪಂದ್ಯಗಳ ಇನ್ನುಳಿದ ಫಲಿತಾಂಶಗಳು: ತುಷಾರ್ ಮದನ್ಗೆ 7–6, 2–6ರಿಂದ ಲಕ್ಷಿತ್ ಸೂದ್ ಎದುರು ಜಯ, ಭರತ್ ನಿಶೋಕ್ ಕುಮಾರನ್ಗೆ3-6, 6-1, 13-11ರಿಂದ ಫರ್ದೀನ್ ಕಮರ್ ಎದುರು, ಜಪಾನ್ನ ದೈಸುಕೆ ಸುಮಿಜಾ ಅವರಿಗೆ6-1, 6-1ರಿಂದ ಭಾರತದ ಚಂದ್ರಿಲ್ ಸೂದ್ ವಿರುದ್ಧ, ರಂಜೀತ್ ವಿರಾಲಿ ಅವರಿಗೆ6-0, 6-2ರಿಂದ ಕವನ್ ಸೋಮುಕುಮಾರ್ ಎದುರು ಜಯ ಒಲಿಯಿತು. ಇಶಾಕ್ ಇಕ್ಬಾಲ್6-4, 6-3ರಿಂದ ಶಹಬಾಜ್ ಖಾನ್ ಎದುರು, ಪಾರಸ್ ದಹಿಯಾ6-2, 6-4ರಿಂದ ವಿನಾಯಕ್ ಶರ್ಮಾ ಕಜಾ ವಿರುದ್ಧ, ಲೋಹಿತಾಕ್ಷ ಬದ್ರಿನಾಥ್6-4, 6-2ರಿಂದ ರೋನಿನ್ ಲೋಟ್ಲಿಕರ್ ಎದುರು ಗೆದ್ದು ಮುಂದಿನ ಎರಡನೇ ಸುತ್ತಿಗೆ ಅರ್ಹತೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕದ ಸೂರಜ್ ಪ್ರಬೋಧ್, ರಿಷಿ ರೆಡ್ಡಿ ಮಮತ್ತು ಆದಿಲ್ ಕಲ್ಯಾಣ್ಪುರಿ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಆತಿಥ್ಯದಲ್ಲಿ ನಡೆಯುತ್ತಿರುವ ಐಟಿಎಫ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತುಗಳಲ್ಲಿ ಮುನ್ನಡೆದರು.</p>.<p>ಕೆಎಸ್ಎಲ್ಟಿಎ ಅಂಗಣದಲ್ಲಿ ಭಾನುವಾರ ಆರಂಭವಾದ ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಸೂರಜ್6-4, 6-2ರಿಂದ ಶ್ರೀಲಂಕಾದ ಚಾತುರ್ಯ ನೀಲವೀರ ಅವರ ಸವಾಲು ಮೀರಿದರೆ, ಆದಿಲ್ ಅವರಿಗೆ 6-1, 6-2ರಿಂದ ಥಾಯ್ಲೆಂಡ್ನ ವೊರೊವಿನ್ ಕುಂಥೊನ್ಕಿಟ್ಟಿಕುಲ್ ವಿರುದ್ಧ ಜಯ ಒಲಿಯಿತು. ಮತ್ತೊಂದು ಹಣಾಹಣಿಯಲ್ಲಿ ರಿಷಿ6-3, 7-5ರಿಂದ ಈಜಿಪ್ಟ್ನ ಅಕ್ರಂ ಎಲ್ ಸಲಾರಿ ಅವರನ್ನು ಪರಾಭವಗೊಳಿಸಿದರು.</p>.<p>ಮೊದಲ ಸುತ್ತನ ಮತ್ತೊಂದು ಸೆಣಸಾಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಕರಣ್ ಸಿಂಗ್6-1, 6-0ರಿಂದ ಮತ್ತೊಬ್ಬ ಶ್ರೀಲಂಕಾ ಆಟಗಾರ ಥೆಹಾನ್ ಸಂಜಯ ವಿರುದ್ಧ ಗೆದ್ದರು. ಅರ್ಹತಾ ಸುತ್ತಿನಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಭಾರತದ ದೇವ್ ಜಾವಿಯಾ ಅವರು7-5, 6-2ರಿಂದ ಭಾರತದವರೇ ಆದ ಅರ್ನಾವ್ ಪತಂಗೆ ಅವರನ್ನು ಸೋಲಿಸಿ ಮುನ್ನಡೆದರು.</p>.<p>ಮೊದಲ ಸುತ್ತಿನ ಅರ್ಹತಾ ಪಂದ್ಯಗಳ ಇನ್ನುಳಿದ ಫಲಿತಾಂಶಗಳು: ತುಷಾರ್ ಮದನ್ಗೆ 7–6, 2–6ರಿಂದ ಲಕ್ಷಿತ್ ಸೂದ್ ಎದುರು ಜಯ, ಭರತ್ ನಿಶೋಕ್ ಕುಮಾರನ್ಗೆ3-6, 6-1, 13-11ರಿಂದ ಫರ್ದೀನ್ ಕಮರ್ ಎದುರು, ಜಪಾನ್ನ ದೈಸುಕೆ ಸುಮಿಜಾ ಅವರಿಗೆ6-1, 6-1ರಿಂದ ಭಾರತದ ಚಂದ್ರಿಲ್ ಸೂದ್ ವಿರುದ್ಧ, ರಂಜೀತ್ ವಿರಾಲಿ ಅವರಿಗೆ6-0, 6-2ರಿಂದ ಕವನ್ ಸೋಮುಕುಮಾರ್ ಎದುರು ಜಯ ಒಲಿಯಿತು. ಇಶಾಕ್ ಇಕ್ಬಾಲ್6-4, 6-3ರಿಂದ ಶಹಬಾಜ್ ಖಾನ್ ಎದುರು, ಪಾರಸ್ ದಹಿಯಾ6-2, 6-4ರಿಂದ ವಿನಾಯಕ್ ಶರ್ಮಾ ಕಜಾ ವಿರುದ್ಧ, ಲೋಹಿತಾಕ್ಷ ಬದ್ರಿನಾಥ್6-4, 6-2ರಿಂದ ರೋನಿನ್ ಲೋಟ್ಲಿಕರ್ ಎದುರು ಗೆದ್ದು ಮುಂದಿನ ಎರಡನೇ ಸುತ್ತಿಗೆ ಅರ್ಹತೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>