ಎಕೆಂಟಲ್, ಜರ್ಮನಿ: ಭಾರತದ ಆಟಗಾರ ರಾಮಕುಮಾರ್ ರಾಮನಾಥನ್ ಚಾಲೆಂಜರ್ ಸರ್ಕೀಟ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಮತ್ತೊಮ್ಮೆ ಎಡವಿದರು. ಭಾನುವಾರ ನಡೆದ ಎಕೆಂಟಲ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅವರು 4–6, 4–6ರಿಂದ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಎದುರು ಪರಾಭವಗೊಂಡರು.