ಬೆಂಗಳೂರು: ಜಯದ ಓಟ ಮುಂದುವರಿಸಿದ ಚನ್ನಮಲ್ಲಿಕಾರ್ಜುನ ಯಾಲೆ ಮತ್ತು ರಿತಿಕಾ ರವಿ ಅವರು ಎಐಟಿಎ 14 ವರ್ಷದೊಳಗಿನವರ ಸಿಎಸ್7 ಟೆನಿಸ್ ಟೂರ್ನಿಯ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.ಶ್ರೀನಾಥ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಬುಧವಾರ ಚನ್ನಮಲ್ಲಿಕಾರ್ಜುನ2-6, 6-2, 6-2ರಿಂದ ವಿಷ್ಣು ಮೋಹನ್ ಅವರನ್ನು ಮಣಿಸಿದರು. ಮೊದಲ ಸೆಟ್ ಕಳೆದುಕೊಂಡರೂ ಛಲಬಿಡದ ಚನ್ನಮಲ್ಲಿಕಾರ್ಜುನ ಅವರಿಗೆ ಜಯ ಒಲಿಯಿತು.