<p><strong>ಪೂರ್ವಂಕರ ಗಾಲ್ಫ್ ಲೀಗ್</strong><br /> <strong>ಬೆಂಗಳೂರು: </strong>ಪೂರ್ವಂಕರ ಸಮೂಹ ಹಾಗೂ ಟಾಷ್ ಗಾಲ್ಫ್ ಸ್ಪೋರ್ಟ್ಸ್ ಖಾಸಗಿ ನಿಯಮಿತ ಸಂಸ್ಥೆ ಆಶ್ರಯದಲ್ಲಿ 2011ನೇ ಸಾಲಿನ ಗಾಲ್ಫ್ ಲೀಗ್ ಬೆಂಗಳೂರು, ನವದೆಹಲಿ, ಮುಂಬೈ, ಪುಣೆ, ಕೋಲ್ಕತ್ತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.<br /> <br /> ವಲಯ ತಂಡಗಳ ಹಣಾಹಣಿಯ ಪೂರ್ವಂಕರ ಟಾಷ್ ಗಾಲ್ಫ್ ಲೀಗ್ ವಿವರವನ್ನು ನೀಡಿದ ಏಷ್ಯಾ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ರಶೀದ್ ಖಾನ್ `ಅಮೆಚೂರ್ ಗಾಲ್ಫರ್ಗಳು ಸಾಮರ್ಥ್ಯ ತೋರಲು ಈ ಟೂರ್ನಿ ಉತ್ತಮ ಅವಕಾಶವಾಗಿದೆ~ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ವಿವಿಧ ವಲಯ ಲೀಗ್ನಲ್ಲಿ ಗಾಲ್ಫರ್ಗಳು ಪೈಪೋಟಿ ನಡೆಸಿ ವಲಯ ತಂಡವನ್ನು ಪ್ರತಿನಿಧಿಸುವ ಅರ್ಹತೆ ಪಡೆಯುವರು. ಫೈನಲ್ನಲ್ಲಿ ವಲಯಗಳ ಒಟ್ಟು 24 ಗುಂಪುಗಳು ಅರ್ಹತೆ ಪಡೆಯಲಿವೆ. ಅಂತಿಮ ಲೀಗ್ ಹಣಾಹಣಿಯು ಶ್ರೀಲಂಕಾದ ವಿಕ್ಟೋರಿಯಾ ಗಾಲ್ಫ್ ಮತ್ತು ಕಂಟ್ರಿ ರೆಸಾರ್ಟ್ ಕೋರ್ಸ್ನಲ್ಲಿ ನಡೆಯಲಿದೆ.<br /> <br /> ಪತ್ರಿಕಾ ಗೋಷ್ಠಿಯಲ್ಲಿ ಪೂರ್ವಂಕರ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಜ್ಯಾಕ್ ಬ್ಯಾಸ್ಟಿಯನ್ ನಜಾರೆಥ್, ಟಾಷ್ನ ವ್ಯವಸ್ಥಾಪಕ ನಿರ್ದೇಶಕ ರತನ್ ಕುಮಾರ್ ಹಾಗೂ ಭಾರತದ ಮೊದಲ ಕ್ರಮಾಂಕದ ಗಾಲ್ಫರ್ ಎಸ್.ಚಿಕ್ಕರಂಗಪ್ಪ ಸೇರಿದಂತೆ ಅನೇಕ ಅಮೇಚೂರ್ ಗಾಲ್ಫರ್ಗಳು ಹಾಜರಿದ್ದರು. <br /> <br /> <strong>ಕಬಡ್ಡಿ ಟೂರ್ನಿ<br /> ಬೆಂಗಳೂರು:</strong> ಹೂಡಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಪ್ರೌಢ ಶಾಲೆಗಳ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಕಬಡ್ಡಿ ಟೂರ್ನಿ ನಗರದ ವೈಟ್ಫೀಲ್ಡ್ ಮುಖ್ಯರಸ್ತೆಯಲ್ಲಿನ ಡಾ.ರಾಜ್ ಕುಮಾರ್ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.<br /> <br /> ಆಸಕ್ತ ಶಾಲೆ ಹಾಗೂ ಕಾಲೇಜುಗಳು ಸೆ.6ರೊಳಗೆ ಪ್ರವೇಶ ಪತ್ರಗಳನ್ನು ಆಟಗಾರರ ಅಗತ್ಯ ವಯಸ್ಸಿನ ದಾಖಲೆಗಳೊಂದಿಗೆ ಸಂಘಟಕರಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9980857573 ಅಥವಾ 9980342089ಗೆ ಸಂಪರ್ಕಿಸಲು ಕೋರಲಾಗಿದೆ.<br /> <br /> <strong>ಬ್ಯಾಡ್ಮಿಂಟನ್: ಕ್ವಾರ್ಟರ್ಫೈನಲ್ಗೆ ಆದಿತ್ಯ ಪ್ರಕಾಶ್<br /> ಬೆಂಗಳೂರು: </strong>ಕರ್ನಾಟಕ ಆದಿತ್ಯ ಪ್ರಕಾಶ್ ಇಲ್ಲಿ ನಡೆಯುತ್ತಿರುವ ಐಎಫ್ಸಿಎ ಅಖಿಲ ಭಾರತ ಸೀನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.<br /> ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಆದಿತ್ಯ ಪ್ರಕಾಶ್ 21-17, 21-13ರಲ್ಲಿ ಸಾರಂಗ ಲಾಖೇನ ವಿರುದ್ಧ ಗೆಲುವು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೂರ್ವಂಕರ ಗಾಲ್ಫ್ ಲೀಗ್</strong><br /> <strong>ಬೆಂಗಳೂರು: </strong>ಪೂರ್ವಂಕರ ಸಮೂಹ ಹಾಗೂ ಟಾಷ್ ಗಾಲ್ಫ್ ಸ್ಪೋರ್ಟ್ಸ್ ಖಾಸಗಿ ನಿಯಮಿತ ಸಂಸ್ಥೆ ಆಶ್ರಯದಲ್ಲಿ 2011ನೇ ಸಾಲಿನ ಗಾಲ್ಫ್ ಲೀಗ್ ಬೆಂಗಳೂರು, ನವದೆಹಲಿ, ಮುಂಬೈ, ಪುಣೆ, ಕೋಲ್ಕತ್ತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.<br /> <br /> ವಲಯ ತಂಡಗಳ ಹಣಾಹಣಿಯ ಪೂರ್ವಂಕರ ಟಾಷ್ ಗಾಲ್ಫ್ ಲೀಗ್ ವಿವರವನ್ನು ನೀಡಿದ ಏಷ್ಯಾ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ರಶೀದ್ ಖಾನ್ `ಅಮೆಚೂರ್ ಗಾಲ್ಫರ್ಗಳು ಸಾಮರ್ಥ್ಯ ತೋರಲು ಈ ಟೂರ್ನಿ ಉತ್ತಮ ಅವಕಾಶವಾಗಿದೆ~ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ವಿವಿಧ ವಲಯ ಲೀಗ್ನಲ್ಲಿ ಗಾಲ್ಫರ್ಗಳು ಪೈಪೋಟಿ ನಡೆಸಿ ವಲಯ ತಂಡವನ್ನು ಪ್ರತಿನಿಧಿಸುವ ಅರ್ಹತೆ ಪಡೆಯುವರು. ಫೈನಲ್ನಲ್ಲಿ ವಲಯಗಳ ಒಟ್ಟು 24 ಗುಂಪುಗಳು ಅರ್ಹತೆ ಪಡೆಯಲಿವೆ. ಅಂತಿಮ ಲೀಗ್ ಹಣಾಹಣಿಯು ಶ್ರೀಲಂಕಾದ ವಿಕ್ಟೋರಿಯಾ ಗಾಲ್ಫ್ ಮತ್ತು ಕಂಟ್ರಿ ರೆಸಾರ್ಟ್ ಕೋರ್ಸ್ನಲ್ಲಿ ನಡೆಯಲಿದೆ.<br /> <br /> ಪತ್ರಿಕಾ ಗೋಷ್ಠಿಯಲ್ಲಿ ಪೂರ್ವಂಕರ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಜ್ಯಾಕ್ ಬ್ಯಾಸ್ಟಿಯನ್ ನಜಾರೆಥ್, ಟಾಷ್ನ ವ್ಯವಸ್ಥಾಪಕ ನಿರ್ದೇಶಕ ರತನ್ ಕುಮಾರ್ ಹಾಗೂ ಭಾರತದ ಮೊದಲ ಕ್ರಮಾಂಕದ ಗಾಲ್ಫರ್ ಎಸ್.ಚಿಕ್ಕರಂಗಪ್ಪ ಸೇರಿದಂತೆ ಅನೇಕ ಅಮೇಚೂರ್ ಗಾಲ್ಫರ್ಗಳು ಹಾಜರಿದ್ದರು. <br /> <br /> <strong>ಕಬಡ್ಡಿ ಟೂರ್ನಿ<br /> ಬೆಂಗಳೂರು:</strong> ಹೂಡಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಪ್ರೌಢ ಶಾಲೆಗಳ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಕಬಡ್ಡಿ ಟೂರ್ನಿ ನಗರದ ವೈಟ್ಫೀಲ್ಡ್ ಮುಖ್ಯರಸ್ತೆಯಲ್ಲಿನ ಡಾ.ರಾಜ್ ಕುಮಾರ್ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.<br /> <br /> ಆಸಕ್ತ ಶಾಲೆ ಹಾಗೂ ಕಾಲೇಜುಗಳು ಸೆ.6ರೊಳಗೆ ಪ್ರವೇಶ ಪತ್ರಗಳನ್ನು ಆಟಗಾರರ ಅಗತ್ಯ ವಯಸ್ಸಿನ ದಾಖಲೆಗಳೊಂದಿಗೆ ಸಂಘಟಕರಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9980857573 ಅಥವಾ 9980342089ಗೆ ಸಂಪರ್ಕಿಸಲು ಕೋರಲಾಗಿದೆ.<br /> <br /> <strong>ಬ್ಯಾಡ್ಮಿಂಟನ್: ಕ್ವಾರ್ಟರ್ಫೈನಲ್ಗೆ ಆದಿತ್ಯ ಪ್ರಕಾಶ್<br /> ಬೆಂಗಳೂರು: </strong>ಕರ್ನಾಟಕ ಆದಿತ್ಯ ಪ್ರಕಾಶ್ ಇಲ್ಲಿ ನಡೆಯುತ್ತಿರುವ ಐಎಫ್ಸಿಎ ಅಖಿಲ ಭಾರತ ಸೀನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.<br /> ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ಆದಿತ್ಯ ಪ್ರಕಾಶ್ 21-17, 21-13ರಲ್ಲಿ ಸಾರಂಗ ಲಾಖೇನ ವಿರುದ್ಧ ಗೆಲುವು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>