<p>ಬೆಂಗಳೂರು: ಕರ್ನಾಟಕದ ಆಟಗಾರ ರಾದ ಆದಿಲ್ ಕಲ್ಯಾಣ್ಪುರ್, ಬಿ.ಆರ್ ನಿಕ್ಷೇಪ್ ಹಾಗೂ ರಿಷಿ ರೆಡ್ಡಿ ಇಲ್ಲಿ ನಡೆಯುತ್ತಿರುವ ಆರ್.ಟಿ.ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಕೆಎಸ್ಎಲ್ಟಿಎ ಅಂಗಳದಲ್ಲಿ ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ನ ಬಾಲಕರ ವಿಭಾಗದ ಪಂದ್ಯದಲ್ಲಿ ಬಿ.ಆರ್ ನಿಕ್ಷೇಪ್ 6–0, 6–1 ರಲ್ಲಿ ಆಂಧ್ರ ಪ್ರದೇಶದ ಪಿ ಸಿದ್ದಾರ್ಥ್ ಅವರನ್ನು ಸುಲಭವಾಗಿ ಮಣಿಸಿದರು.<br /> <br /> ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಆದಿಲ್ ಕಲ್ಯಾಣ್ಪುರ್ 7–6 (4), 6–1 ರಿಂದ ಉತ್ಕರ್ಷ್ ಭಾರದ್ವಾಜ್ ವಿರುದ್ಧ ಜಯ ಸಾಧಿಸಿದರು.<br /> <br /> ಉಳಿದಂತೆ ರಿಷಿ ರೆಡ್ಡಿ 6–3, 6–2 ರಿಂದ ಸಿದ್ದಾರ್ಥ್ ಅವರನ್ನೂ, ಎಸ್.ವಿಘ್ನೇಶ್ 6–1, 4–6, 6–2 ರಿಂದ ಯಶ್ ಯಾದವ್ ವಿರುದ್ಧವೂ, ಧ್ರುವ್ ಸುನೀಶ್ 3–6, 6–4, 6–3 ರಲ್ಲಿ ಐಸಾಕ್ ಇಕ್ಬಾಲ್ ಎದುರೂ, ರಿಯಾನ್ ಡಿ ಪಂಡೋಲೆ 7–5, 2–6, 6–4 ರಲ್ಲಿ ಪರೀಕ್ಷಿತ್ ಸೊಮಾನಿ ಮೇಲೂ ಜಯ ಸಾಧಿಸಿದರು.<br /> <br /> ಎಂಎಸ್ಎಸ್ ಕೋರ್ಟ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಜಮ್ಮು ಕಾಶ್ಮೀರದ ಪ್ರಿಂಕಲ್ ಸಿಂಗ್ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸಮಾ ಸಾತ್ವಿಕ ಅವರನ್ನು 6–3, 7–6 (6)ರಿಂದ ಮಣಿಸಿದರು. ಗುಜರಾತ್ನ ರುತ್ವಿಕ್ ಷಾ, ಸಾಯಿ ಅವಂತಿಕಾ ವಿರುದ್ಧ 6–4, 1–6, 6–2 ರಲ್ಲಿ ಜಯ ಸಾಧಿಸಿದರೆ, ಐದನೇ ಶ್ರೇಯಾಂಕಿತ ಆಟಗಾರ್ತಿ ಹರ್ಷಾ ಸಾಯಿ ಚಲ್ಲಾ 6–4, 5–7, 3–6 ರಲ್ಲಿ ದೆಹಲಿಯ ಸಭ್ಯತಾ ನಿಹಲಾನಿ ಅವರಿಗೆ ಶರಣಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕರ್ನಾಟಕದ ಆಟಗಾರ ರಾದ ಆದಿಲ್ ಕಲ್ಯಾಣ್ಪುರ್, ಬಿ.ಆರ್ ನಿಕ್ಷೇಪ್ ಹಾಗೂ ರಿಷಿ ರೆಡ್ಡಿ ಇಲ್ಲಿ ನಡೆಯುತ್ತಿರುವ ಆರ್.ಟಿ.ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಕೆಎಸ್ಎಲ್ಟಿಎ ಅಂಗಳದಲ್ಲಿ ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ನ ಬಾಲಕರ ವಿಭಾಗದ ಪಂದ್ಯದಲ್ಲಿ ಬಿ.ಆರ್ ನಿಕ್ಷೇಪ್ 6–0, 6–1 ರಲ್ಲಿ ಆಂಧ್ರ ಪ್ರದೇಶದ ಪಿ ಸಿದ್ದಾರ್ಥ್ ಅವರನ್ನು ಸುಲಭವಾಗಿ ಮಣಿಸಿದರು.<br /> <br /> ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಆದಿಲ್ ಕಲ್ಯಾಣ್ಪುರ್ 7–6 (4), 6–1 ರಿಂದ ಉತ್ಕರ್ಷ್ ಭಾರದ್ವಾಜ್ ವಿರುದ್ಧ ಜಯ ಸಾಧಿಸಿದರು.<br /> <br /> ಉಳಿದಂತೆ ರಿಷಿ ರೆಡ್ಡಿ 6–3, 6–2 ರಿಂದ ಸಿದ್ದಾರ್ಥ್ ಅವರನ್ನೂ, ಎಸ್.ವಿಘ್ನೇಶ್ 6–1, 4–6, 6–2 ರಿಂದ ಯಶ್ ಯಾದವ್ ವಿರುದ್ಧವೂ, ಧ್ರುವ್ ಸುನೀಶ್ 3–6, 6–4, 6–3 ರಲ್ಲಿ ಐಸಾಕ್ ಇಕ್ಬಾಲ್ ಎದುರೂ, ರಿಯಾನ್ ಡಿ ಪಂಡೋಲೆ 7–5, 2–6, 6–4 ರಲ್ಲಿ ಪರೀಕ್ಷಿತ್ ಸೊಮಾನಿ ಮೇಲೂ ಜಯ ಸಾಧಿಸಿದರು.<br /> <br /> ಎಂಎಸ್ಎಸ್ ಕೋರ್ಟ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಜಮ್ಮು ಕಾಶ್ಮೀರದ ಪ್ರಿಂಕಲ್ ಸಿಂಗ್ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸಮಾ ಸಾತ್ವಿಕ ಅವರನ್ನು 6–3, 7–6 (6)ರಿಂದ ಮಣಿಸಿದರು. ಗುಜರಾತ್ನ ರುತ್ವಿಕ್ ಷಾ, ಸಾಯಿ ಅವಂತಿಕಾ ವಿರುದ್ಧ 6–4, 1–6, 6–2 ರಲ್ಲಿ ಜಯ ಸಾಧಿಸಿದರೆ, ಐದನೇ ಶ್ರೇಯಾಂಕಿತ ಆಟಗಾರ್ತಿ ಹರ್ಷಾ ಸಾಯಿ ಚಲ್ಲಾ 6–4, 5–7, 3–6 ರಲ್ಲಿ ದೆಹಲಿಯ ಸಭ್ಯತಾ ನಿಹಲಾನಿ ಅವರಿಗೆ ಶರಣಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>