<p><strong>ನವದೆಹಲಿ (ಪಿಟಿಐ/ಐಎಎನ್ಎಸ್): </strong>ದೇಶದ ಅಗ್ರ ಕ್ರಮಾಂಕದ ಆಟಗಾರ ಲಿಯಾಂಡರ್ ಪೇಸ್ ಅವರು ಲಂಡನ್ ಒಲಿಂಪಿಕ್ಸ್ನಲ್ಲಿ ಆಡಲು ಇನ್ನೂ ಸಮ್ಮತಿ ಸೂಚಿಸದೇ ಇರುವುದು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಚಿಂತೆಗೆ ಕಾರಣವಾಗಿದೆ.<br /> <br /> ಅಷ್ಟು ಮಾತ್ರವಲ್ಲದೇ, `ನೂತನ ಜೊತೆಗಾರನೊಂದಿಗೆ ಆಡಲು ಲಿಯಾಂಡರ್ ಒಪ್ಪುವುದು ಅನುಮಾನ~ ಎಂದು ಅವರ ತಂದೆ ಡಾ.ವೇಸ್ ಪೇಸ್ ಕೂಡ ಹೇಳಿದ್ದಾರೆ. ಹಾಗಾಗಿ ಪೇಸ್ ಮನವೊಲಿಸಲು ಎಐಟಿಎ ಆಯ್ಕೆ ಸಮಿತಿ ಮುಂದಾಗಿದೆ.<br /> <br /> ಎಐಟಿಎ ಕೈಗೊಂಡಿರುವ ಪರಿಷ್ಕೃತ ಆಯ್ಕೆ ಬಗ್ಗೆ ಪೇಸ್ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಈ ಕಾರಣ ಆಯ್ಕೆ ಸಮಿತಿ ಸದಸ್ಯ ರೋಹಿತ್ ರಾಜ್ಪಾಲ್ ಅವರು ಲಂಡನ್ನಲ್ಲಿ ಪೇಸ್ ಅವರ ಮನವೊಲಿಸಲು ಪ್ರಯತ್ನಿಸಲಿದ್ದಾರೆ.<br /> ಆದರೆ `ತಂಡದ ಆಯ್ಕೆ ಬಗ್ಗೆ ಪೇಸ್ ಅಸಮಾಧಾನಗೊಂಡಿದ್ದಾರೆ. <br /> <br /> ಹಾಗಾಗಿ ಇದಕ್ಕೆ ಅವರು ಒಪ್ಪುವ ಸಾಧ್ಯತೆ ಕಡಿಮೆ~ ಎಂದು ವೇಸ್ ಪೇಸ್ ತಿಳಿಸಿದ್ದಾರೆ. ಜೊತೆಗೂಡಿ ಆಡಲು ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಒಪ್ಪದ ಕಾರಣ ಪೇಸ್ ಹಾಗೂ ಯುವಆಟಗಾರ ವಿಷ್ಣುವರ್ಧನ್ ಅವರನ್ನು ಕಣಕ್ಕಿಳಿಸಲು ಎಐಟಿಎ ಗುರುವಾರ ನಿರ್ಧಾರ ತೆಗೆದುಕೊಂಡಿತ್ತು. ಅಷ್ಟು ಮಾತ್ರವಲ್ಲದೇ, ಮಿಶ್ರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ಪೇಸ್ ಅವರನ್ನು ಆಡಿಸಲು ತೀರ್ಮಾನಿಸಿತ್ತು.<br /> <br /> ಆದರೆ ಸಾನಿಯಾ ತಮ್ಮ ಜೊತೆ ಆಡುತ್ತಾರೆ ಎಂಬುದಕ್ಕೆ ಲಿಖಿತ ಭರವಸೆಯನ್ನು ಸಂಸ್ಥೆಯಿಂದ ಪೇಸ್ ಕೋರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರು ಕೂಟದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಟೆನಿಸ್ ಸಂಸ್ಥೆ ಈಗ ಪ್ರಯತ್ನಿಸುತ್ತಿದೆ. <br /> <br /> `ಪ್ರಸಕ್ತ ಖಾಸಗಿ ಭೇಟಿಯ ಮೇರೆಗೆ ಲಂಡನ್ನಲ್ಲಿರುವ ಎಐಟಿಎ ಆಯ್ಕೆ ಸಮಿತಿಯ ಹಿರಿಯ ಸದಸ್ಯ ರೋಹಿತ್ ರಾಜ್ಪಾಲ್, ಪೇಸ್ ಮನವೊಲಿಸಲು ಪ್ರಯತ್ನಿಸಲಿದ್ದಾರೆ~ ಎಂದು ಎಐಟಿಎ ಮೂಲಗಳು ಹೇಳಿವೆ.</p>.<p><strong>ವೈಯಕ್ತಿಕ ಅಹಂ ಬದಿಗಿಡಿ: ಕೃಷ್ಣ</strong></p>.<p><strong>ಬೆಂಗಳೂರು: </strong>`ನಿಮ್ಮ ವೈಯಕ್ತಿಕ ಅಹಂ ಬದಿಗಿಟ್ಟು ಲಂಡನ್ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಗೌರವ ತರಲು ಪ್ರಯತ್ನಿಸಿ~ ಎಂದು ಎಐಟಿಎ ಗೌರವ ಅಧ್ಯಕ್ಷರೂ ಆಗಿರುವ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಟೆನಿಸ್ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ/ಐಎಎನ್ಎಸ್): </strong>ದೇಶದ ಅಗ್ರ ಕ್ರಮಾಂಕದ ಆಟಗಾರ ಲಿಯಾಂಡರ್ ಪೇಸ್ ಅವರು ಲಂಡನ್ ಒಲಿಂಪಿಕ್ಸ್ನಲ್ಲಿ ಆಡಲು ಇನ್ನೂ ಸಮ್ಮತಿ ಸೂಚಿಸದೇ ಇರುವುದು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಚಿಂತೆಗೆ ಕಾರಣವಾಗಿದೆ.<br /> <br /> ಅಷ್ಟು ಮಾತ್ರವಲ್ಲದೇ, `ನೂತನ ಜೊತೆಗಾರನೊಂದಿಗೆ ಆಡಲು ಲಿಯಾಂಡರ್ ಒಪ್ಪುವುದು ಅನುಮಾನ~ ಎಂದು ಅವರ ತಂದೆ ಡಾ.ವೇಸ್ ಪೇಸ್ ಕೂಡ ಹೇಳಿದ್ದಾರೆ. ಹಾಗಾಗಿ ಪೇಸ್ ಮನವೊಲಿಸಲು ಎಐಟಿಎ ಆಯ್ಕೆ ಸಮಿತಿ ಮುಂದಾಗಿದೆ.<br /> <br /> ಎಐಟಿಎ ಕೈಗೊಂಡಿರುವ ಪರಿಷ್ಕೃತ ಆಯ್ಕೆ ಬಗ್ಗೆ ಪೇಸ್ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಈ ಕಾರಣ ಆಯ್ಕೆ ಸಮಿತಿ ಸದಸ್ಯ ರೋಹಿತ್ ರಾಜ್ಪಾಲ್ ಅವರು ಲಂಡನ್ನಲ್ಲಿ ಪೇಸ್ ಅವರ ಮನವೊಲಿಸಲು ಪ್ರಯತ್ನಿಸಲಿದ್ದಾರೆ.<br /> ಆದರೆ `ತಂಡದ ಆಯ್ಕೆ ಬಗ್ಗೆ ಪೇಸ್ ಅಸಮಾಧಾನಗೊಂಡಿದ್ದಾರೆ. <br /> <br /> ಹಾಗಾಗಿ ಇದಕ್ಕೆ ಅವರು ಒಪ್ಪುವ ಸಾಧ್ಯತೆ ಕಡಿಮೆ~ ಎಂದು ವೇಸ್ ಪೇಸ್ ತಿಳಿಸಿದ್ದಾರೆ. ಜೊತೆಗೂಡಿ ಆಡಲು ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಒಪ್ಪದ ಕಾರಣ ಪೇಸ್ ಹಾಗೂ ಯುವಆಟಗಾರ ವಿಷ್ಣುವರ್ಧನ್ ಅವರನ್ನು ಕಣಕ್ಕಿಳಿಸಲು ಎಐಟಿಎ ಗುರುವಾರ ನಿರ್ಧಾರ ತೆಗೆದುಕೊಂಡಿತ್ತು. ಅಷ್ಟು ಮಾತ್ರವಲ್ಲದೇ, ಮಿಶ್ರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ಪೇಸ್ ಅವರನ್ನು ಆಡಿಸಲು ತೀರ್ಮಾನಿಸಿತ್ತು.<br /> <br /> ಆದರೆ ಸಾನಿಯಾ ತಮ್ಮ ಜೊತೆ ಆಡುತ್ತಾರೆ ಎಂಬುದಕ್ಕೆ ಲಿಖಿತ ಭರವಸೆಯನ್ನು ಸಂಸ್ಥೆಯಿಂದ ಪೇಸ್ ಕೋರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರು ಕೂಟದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಟೆನಿಸ್ ಸಂಸ್ಥೆ ಈಗ ಪ್ರಯತ್ನಿಸುತ್ತಿದೆ. <br /> <br /> `ಪ್ರಸಕ್ತ ಖಾಸಗಿ ಭೇಟಿಯ ಮೇರೆಗೆ ಲಂಡನ್ನಲ್ಲಿರುವ ಎಐಟಿಎ ಆಯ್ಕೆ ಸಮಿತಿಯ ಹಿರಿಯ ಸದಸ್ಯ ರೋಹಿತ್ ರಾಜ್ಪಾಲ್, ಪೇಸ್ ಮನವೊಲಿಸಲು ಪ್ರಯತ್ನಿಸಲಿದ್ದಾರೆ~ ಎಂದು ಎಐಟಿಎ ಮೂಲಗಳು ಹೇಳಿವೆ.</p>.<p><strong>ವೈಯಕ್ತಿಕ ಅಹಂ ಬದಿಗಿಡಿ: ಕೃಷ್ಣ</strong></p>.<p><strong>ಬೆಂಗಳೂರು: </strong>`ನಿಮ್ಮ ವೈಯಕ್ತಿಕ ಅಹಂ ಬದಿಗಿಟ್ಟು ಲಂಡನ್ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಗೌರವ ತರಲು ಪ್ರಯತ್ನಿಸಿ~ ಎಂದು ಎಐಟಿಎ ಗೌರವ ಅಧ್ಯಕ್ಷರೂ ಆಗಿರುವ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಟೆನಿಸ್ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>