<p>ಬೆಂಗಳೂರು: ಉಮಾಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಆರ್ಬಿಐ ತಂಡ ಪುನರಾರಂಭವಾದ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಶುಕ್ರವಾರದ ಪಂದ್ಯದಲ್ಲಿ 4-3ಗೋಲುಗಳಿಂದ ಎಲ್ಆರ್ಡಿಇ ಎದುರು ಗೆಲುವು ಸಾಧಿಸಿತು.<br /> <br /> ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ವಿಜಯಿ ತಂಡದ ಅಲ್ವಿನ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಉಮಾಶಂಕರ್ 14, 30 ಹಾಗೂ 47ನೇ ನಿಮಿಷದಲ್ಲಿ ಗೋಲು ಗಳಿಸಿದರು. <br /> <br /> ಎಲ್ಆರ್ಡಿಇ ತಂಡದ ಚಂದ್ರಕುಮಾರ್ ಸಹ ಇದಕ್ಕೆ ತಕ್ಕ ಪೈಪೋಟಿ ಒಡ್ಡಿದರು. ಅವರೂ ಹ್ಯಾಟ್ರಿಕ್ ಗೋಲು ಗಳಿಸಿದರು. ಆ ಗೋಲುಗಳು 44, 50 ಮತ್ತು 70ನೇ ನಿಮಿಷದಲ್ಲಿ ಬಂದವು. <br /> <br /> ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ (ಕೆಜಿಎಫ್ ಅಕಾಡೆಮಿ) 2-0ಗೋಲುಗಳಿಂದ ಸಿಐಎಲ್ ಎದುರು ಜಯ ಪಡೆಯಿತು. ವಿಜಯಿ ತಂಡದ ರಾಜೇಶ್ ಹಾಗೂ ಕಲಂದರ್ ಕ್ರಮವಾಗಿ 11 ಹಾಗೂ 82ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. <br /> <br /> ಪಂದ್ಯವನ್ನಾಡುತ್ತ ಕ್ರೀಡಾಂಗಣದಲ್ಲಿ ಆಟಗಾರ ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಮುಂದೂಡಲಾಗಿತ್ತು. <br /> <br /> ಶನಿವಾರದ ಪಂದ್ಯಗಳು: ಧರ್ಮರಾಜ್ ಯೂನಿಯನ್-ಐಎಸ್ಆರ್ಒ ಮತ್ತು ಎಚ್ಎಎಲ್-ಎಡಿಇ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಉಮಾಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಆರ್ಬಿಐ ತಂಡ ಪುನರಾರಂಭವಾದ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಶುಕ್ರವಾರದ ಪಂದ್ಯದಲ್ಲಿ 4-3ಗೋಲುಗಳಿಂದ ಎಲ್ಆರ್ಡಿಇ ಎದುರು ಗೆಲುವು ಸಾಧಿಸಿತು.<br /> <br /> ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ವಿಜಯಿ ತಂಡದ ಅಲ್ವಿನ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಉಮಾಶಂಕರ್ 14, 30 ಹಾಗೂ 47ನೇ ನಿಮಿಷದಲ್ಲಿ ಗೋಲು ಗಳಿಸಿದರು. <br /> <br /> ಎಲ್ಆರ್ಡಿಇ ತಂಡದ ಚಂದ್ರಕುಮಾರ್ ಸಹ ಇದಕ್ಕೆ ತಕ್ಕ ಪೈಪೋಟಿ ಒಡ್ಡಿದರು. ಅವರೂ ಹ್ಯಾಟ್ರಿಕ್ ಗೋಲು ಗಳಿಸಿದರು. ಆ ಗೋಲುಗಳು 44, 50 ಮತ್ತು 70ನೇ ನಿಮಿಷದಲ್ಲಿ ಬಂದವು. <br /> <br /> ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ (ಕೆಜಿಎಫ್ ಅಕಾಡೆಮಿ) 2-0ಗೋಲುಗಳಿಂದ ಸಿಐಎಲ್ ಎದುರು ಜಯ ಪಡೆಯಿತು. ವಿಜಯಿ ತಂಡದ ರಾಜೇಶ್ ಹಾಗೂ ಕಲಂದರ್ ಕ್ರಮವಾಗಿ 11 ಹಾಗೂ 82ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. <br /> <br /> ಪಂದ್ಯವನ್ನಾಡುತ್ತ ಕ್ರೀಡಾಂಗಣದಲ್ಲಿ ಆಟಗಾರ ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಮುಂದೂಡಲಾಗಿತ್ತು. <br /> <br /> ಶನಿವಾರದ ಪಂದ್ಯಗಳು: ಧರ್ಮರಾಜ್ ಯೂನಿಯನ್-ಐಎಸ್ಆರ್ಒ ಮತ್ತು ಎಚ್ಎಎಲ್-ಎಡಿಇ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>