<p><strong>ದಾವಣಗೆರೆ:</strong> ಕಳೆದ ಬಾರಿಯ ವಿಜೇತ ಎ.ಬಾಲಕಿಶನ್, ಆರನೇ ಸುತ್ತಿನಲ್ಲಿ ಕೊನೆಯದಾಗಿ ಮುಗಿದ ದೀರ್ಘ ಪಂದ್ಯದಲ್ಲಿ ಶಿವಮೊಗ್ಗದ ಕಿಶನ್ ಗಂಗೊಳ್ಳಿ ವಿರುದ್ಧ `ಪಾಸರ್ ಪಾನ್' ನೆರವಿನಿಂದ ಗೆಲುವು ಸಾಧಿಸಿದರು.<br /> <br /> ಬೆಂಗಳೂರಿನ ಬಾಲಕಿಶನ್ ಈ ಗೆಲುವಿನಿಂದ ರಾಜ್ಯ 25 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಶನಿವಾರ ಅಗ್ರ ಶ್ರೇಯಾಂಕದ ಶ್ರೀರಾಮ ಸರ್ಜಾ (ಶಿವಮೊಗ್ಗ) ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.<br /> <br /> ಅಭಿನವ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನಲ್ಲಿ ಇಬ್ಬರೂ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಗರಿಷ್ಠ ಆರು ಪಾಯಿಂಟ್ಸ್ ಸಂಗ್ರಹಿಸ್ದ್ದಿದಾರೆ.<br /> <br /> ಒಂದು ಪಾಯಿಂಟ್ ಹಿಂದೆಬಿದ್ದಿರುವ ಏಳು ಮಂದಿ ತಲಾ ಐದು ಪಾಯಿಂಟ್ಗಳೊಡನೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅವರೆಂದರೆ- ಎ.ಆಗಸ್ಟಿನ್ (ಕೊಡಗು), ಆರ್.ಶ್ರೀಧರ್ (ಶಿವಮೊಗ್ಗ), ಆಂಡ್ರಿಯಾ ಡಿಸೋಜ (ಮಂಗಳೂರು), ಎ.ಅಮಿತ್ (ಬೆಂಗಳೂರು), ಲಿಖಿತ್ ಚಿಲ್ಕುರಿ (ದಾವಣಗೆರೆ), ಮನೋಜ್ ಕುಲಕರ್ಣಿ (ಬೆಳಗಾವಿ) ಮತ್ತು ನರೇಶ್ ಬಿ. (ಉಡುಪಿ).<br /> <br /> <strong>ಆರನೇ ಸುತ್ತಿನ ಫಲಿತಾಂಶ:</strong> ಮೊದಲ ಬೋರ್ಡ್ನಲ್ಲಿ ಶ್ರೀರಾಮ್ ಸರ್ಜಾ, ಮಾಜಿ ಚಾಂಪಿಯನ್ ಎ.ಆಗಸ್ಟಿನ್ ವಿರುದ್ಧ ಆರಂಭಿಕ ಮೇಲುಗೈಯನ್ನು 55ನೇ ನಡೆಯಲ್ಲಿ ಗೆಲುವಾಗಿ ಪರಿವರ್ತಿಸಿದರು. ಮೂರನೇ ಬೋರ್ಡ್ನಲ್ಲಿ ಆರ್.ಶ್ರೀಧರ್ ಮತ್ತು ಶಿವಮೊಗ್ಗದ ಕೇದಾರ್ ವಝೆ (4.5) ನಡುವಣ ಸೆಣಸಾಟ `ಡ್ರಾ' ಆಯಿತು.<br /> <br /> ಕಪ್ಪು ಕಾಯಿಗಳಲ್ಲಿ ಆಡಿದ ಆಂಡ್ರಿಯಾ ಡಿಸೋಜ, ಧಾರವಾಡದ ಓಂಕಾರ್ ಎಸ್.ಗಣೇಶಕರ (4) ವಿರುದ್ಧ, ಎ.ಅಮಿತ್, ಧಾರವಾಡದ ಪ್ರಜ್ವಲೇಶ್ (4) ವಿರುದ್ಧ ಜಯಗಳಿಸಿದರು. ಲಿಖಿತ್ ಚಿಲ್ಕುರಿ, ಬಳ್ಳಾರಿಯ ಎಸ್.ಆಕಾಶ್ (4) ವಿರುದ್ಧ, ಬಿ.ನರೇಶ್, ದಾವಣಗೆರೆಯ ಟಿ.ಜಿ.ಅರ್ಜುನ್ (4) ವಿರುದ್ಧ ಗೆಲುವನ್ನು ದಾಖಲಿಸಿದರು.<br /> <br /> ಕಾರವಾರದ ಅವಿನಾಶ ಡಿ.ಮರಾಠೆ (4.5), ಬೆಂಗಳೂರಿನ ಓಜಸ್ ಕುಲಕರ್ಣಿ (4.5) ಜೊತೆ `ಶಾಂತಿ ಒಪ್ಪಂದ'ಕ್ಕೆ ಸಹಿಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕಳೆದ ಬಾರಿಯ ವಿಜೇತ ಎ.ಬಾಲಕಿಶನ್, ಆರನೇ ಸುತ್ತಿನಲ್ಲಿ ಕೊನೆಯದಾಗಿ ಮುಗಿದ ದೀರ್ಘ ಪಂದ್ಯದಲ್ಲಿ ಶಿವಮೊಗ್ಗದ ಕಿಶನ್ ಗಂಗೊಳ್ಳಿ ವಿರುದ್ಧ `ಪಾಸರ್ ಪಾನ್' ನೆರವಿನಿಂದ ಗೆಲುವು ಸಾಧಿಸಿದರು.<br /> <br /> ಬೆಂಗಳೂರಿನ ಬಾಲಕಿಶನ್ ಈ ಗೆಲುವಿನಿಂದ ರಾಜ್ಯ 25 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಶನಿವಾರ ಅಗ್ರ ಶ್ರೇಯಾಂಕದ ಶ್ರೀರಾಮ ಸರ್ಜಾ (ಶಿವಮೊಗ್ಗ) ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.<br /> <br /> ಅಭಿನವ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನಲ್ಲಿ ಇಬ್ಬರೂ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಗರಿಷ್ಠ ಆರು ಪಾಯಿಂಟ್ಸ್ ಸಂಗ್ರಹಿಸ್ದ್ದಿದಾರೆ.<br /> <br /> ಒಂದು ಪಾಯಿಂಟ್ ಹಿಂದೆಬಿದ್ದಿರುವ ಏಳು ಮಂದಿ ತಲಾ ಐದು ಪಾಯಿಂಟ್ಗಳೊಡನೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅವರೆಂದರೆ- ಎ.ಆಗಸ್ಟಿನ್ (ಕೊಡಗು), ಆರ್.ಶ್ರೀಧರ್ (ಶಿವಮೊಗ್ಗ), ಆಂಡ್ರಿಯಾ ಡಿಸೋಜ (ಮಂಗಳೂರು), ಎ.ಅಮಿತ್ (ಬೆಂಗಳೂರು), ಲಿಖಿತ್ ಚಿಲ್ಕುರಿ (ದಾವಣಗೆರೆ), ಮನೋಜ್ ಕುಲಕರ್ಣಿ (ಬೆಳಗಾವಿ) ಮತ್ತು ನರೇಶ್ ಬಿ. (ಉಡುಪಿ).<br /> <br /> <strong>ಆರನೇ ಸುತ್ತಿನ ಫಲಿತಾಂಶ:</strong> ಮೊದಲ ಬೋರ್ಡ್ನಲ್ಲಿ ಶ್ರೀರಾಮ್ ಸರ್ಜಾ, ಮಾಜಿ ಚಾಂಪಿಯನ್ ಎ.ಆಗಸ್ಟಿನ್ ವಿರುದ್ಧ ಆರಂಭಿಕ ಮೇಲುಗೈಯನ್ನು 55ನೇ ನಡೆಯಲ್ಲಿ ಗೆಲುವಾಗಿ ಪರಿವರ್ತಿಸಿದರು. ಮೂರನೇ ಬೋರ್ಡ್ನಲ್ಲಿ ಆರ್.ಶ್ರೀಧರ್ ಮತ್ತು ಶಿವಮೊಗ್ಗದ ಕೇದಾರ್ ವಝೆ (4.5) ನಡುವಣ ಸೆಣಸಾಟ `ಡ್ರಾ' ಆಯಿತು.<br /> <br /> ಕಪ್ಪು ಕಾಯಿಗಳಲ್ಲಿ ಆಡಿದ ಆಂಡ್ರಿಯಾ ಡಿಸೋಜ, ಧಾರವಾಡದ ಓಂಕಾರ್ ಎಸ್.ಗಣೇಶಕರ (4) ವಿರುದ್ಧ, ಎ.ಅಮಿತ್, ಧಾರವಾಡದ ಪ್ರಜ್ವಲೇಶ್ (4) ವಿರುದ್ಧ ಜಯಗಳಿಸಿದರು. ಲಿಖಿತ್ ಚಿಲ್ಕುರಿ, ಬಳ್ಳಾರಿಯ ಎಸ್.ಆಕಾಶ್ (4) ವಿರುದ್ಧ, ಬಿ.ನರೇಶ್, ದಾವಣಗೆರೆಯ ಟಿ.ಜಿ.ಅರ್ಜುನ್ (4) ವಿರುದ್ಧ ಗೆಲುವನ್ನು ದಾಖಲಿಸಿದರು.<br /> <br /> ಕಾರವಾರದ ಅವಿನಾಶ ಡಿ.ಮರಾಠೆ (4.5), ಬೆಂಗಳೂರಿನ ಓಜಸ್ ಕುಲಕರ್ಣಿ (4.5) ಜೊತೆ `ಶಾಂತಿ ಒಪ್ಪಂದ'ಕ್ಕೆ ಸಹಿಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>