ಆಣೆ, ಪ್ರಮಾಣ ಮಾಡಲಿ: ‘ರಾಜೀನಾಮೆ ನೀಡುವುದಕ್ಕಾಗಿ ಮೊದಲು ₹ 5 ಕೋಟಿಗೆ ಒಪ್ಪಂದವಾಗಿತ್ತು. ನಂತರ ನಾರಾಯಣಗೌಡ ಅದು ಸಾಕಾಗುವುದಿಲ್ಲ ಎಂದು ಬೇಡಿಕೆ ಇಟ್ಟ. ಮುಖ್ಯಮಂತ್ರಿಗಳು ₹ 40 ಕೋಟಿ ನೀಡಲು ಒಪ್ಪಿದರು. ಈ ಬಗ್ಗೆ ವಿಶೇಷ ತನಿಖೆ ನಡೆಸಲು ಮುಖ್ಯಮಂತ್ರಿಗಳೇ ಆದೇಶ ನೀಡಬೇಕು. ಒಪ್ಪಂದ ಮಾಡಿಕೊಂಡಿಲ್ಲ ಎನ್ನುವುದಾದರೆ ಯಡಿಯೂರಪ್ಪ, ನಾರಾಯಣಗೌಡ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮನೆ ದೇವರ ಎದುರು ಆಣೆ, ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.