ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಧ್ವಜಗಳು ರಾರಾಜಿಸಿದವು. ಮೂರು ಪಕ್ಷಗಳ ಧ್ವಜ ಹಿಡಿದ ಜನರು ಒಗ್ಗಟ್ಟಿನಿಂದ ಸ್ವಾಗತ ಕೋರಿದರು. ಆ ದೃಶ್ಯವನ್ನು ಕಂಡ ಸುಮಲತಾ ‘ಮಂಡ್ಯದಲ್ಲಿ ಇತಿಹಾಸ ಅಂದರೆ ಇದೇನೇ. ಇಡೀ ದೇಶದಲ್ಲಿ ಮೂರು ಪಕ್ಷದ ಬಾವುಟ ಒಂದೇ ಕಡೆ ಇರುವುದನ್ನು ನೋಡಿದ್ದೀರಾ. ಅಂಬರೀಷ್ಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರು ಇದ್ದರು ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದರು.