‘ನಂದಿನಿ ಲೇಔಟ್ ಬಳಿಯ ರಾಜೀವ್ ಉದ್ಯಾನ ಮುಂಭಾಗದಲ್ಲಿ ಸಂತೋಷ್ ಬೈಕ್ನಲ್ಲಿ ಹೊರಟಿದ್ದರು. ಹಿಂದಿನಿಂದ ಬಂದ ನೀರಿನ ಟ್ಯಾಂಕರ್, ಬೈಕ್ಗೆ ಗುದ್ದಿತ್ತು. ಬೈಕ್ನಿಂದ ಬಿದ್ದ ಸಂತೋಷ್ ಮೇಲೆ ಟ್ಯಾಂಕರ್ನ ಚಕ್ರಗಳು ಹರಿದುಹೋಗಿದ್ದರಿಂದ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಸ್ಥಳೀಯರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ರಾಜಾಜಿನಗರ ಸಂಚಾರ ಪೊಲೀಸರು ಹೇಳಿದರು.