‘ಕರ್ನಾಟಕ ಸರ್ಕಾರ ಮೊದಲ ಬಾರಿಗೆ ನವೋದ್ಯಮ ನೀತಿಯನ್ನು ಜಾರಿಗೆ ತಂದಿದೆ. ಇಂದು ದೇಶದಲ್ಲಿ 40 ಸಾವಿರ ನವೋದ್ಯಮಗಳಿದ್ದು, ಈ ಪೈಕಿ 13 ಸಾವಿರ ನವೋದ್ಯಮಗಳು ನಮ್ಮ ರಾಜ್ಯದಲ್ಲೇ ಇವೆ. ಇದರಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಕೈಗಾರಿಕೆ ಸ್ಥಾಪನೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಲಾಗಿದೆ. ಆದ್ದರಿಂದ ವಿಶ್ವದ ವಿವಿಧ ಭಾಗಗಳಿಂದ ಉದ್ಯಮಿಗಳು ಕಂಪನಿ ತೆರೆಯಲು ಕರ್ನಾಟಕ ರಾಜ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ತುಮಕೂರು ಬಳಿ ಬೃಹತ್ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರುತ್ತಿದೆ. ಈ ಹಬ್ನಲ್ಲಿ ಜಪಾನಿನ ಉದ್ಯಮಗಳೂ ಸ್ಥಾಪನೆಗೊಳ್ಳುತ್ತಿವೆ’ ಎಂದರು.