ಬೆಂಗಳೂರು: ಲಾಲ್ಬಾಗ್ ಸಮೀಪದ ಮಾವಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಶಾಂತಮ್ಮ (75) ಎಂಬುವರಿಂದ 110 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾನೆ.
ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ಮನೆ ಬಳಿ ವಾಯುವಿಹಾರ ಮಾಡುತ್ತಿದ್ದರು. ಈ ವೇಳೆ ಅವರನ್ನೇ ಹಿಂಬಾಲಿಸಿ ಬಂದ ಆರೋಪಿ, ಸರಕ್ಕೆ ಕೈ ಹಾಕಿದ್ದು ಪ್ರತಿರೋಧ ತೋರಿದಾಗ ಕೆಳಗೆ ಬೀಳಿಸಿ ಸರ ಕಿತ್ತುಕೊಂಡಿದ್ದಾನೆ. ಈ ವೇಳೆ ಸ್ಥಳೀಯರೊಬ್ಬರು ಹಿಡಿಯಲು ಯತ್ನಿಸಿದರಾದರೂ, ಕೈಗೆ ಸಿಗದೆ ಓಡಿ ಹೋಗಿದ್ದಾನೆ.