‘ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಆಶೀರ್ವಾದ ಬೆಂಬಲ ಇಲ್ಲದಿದ್ದರೆ ಮಂತ್ರಿಗಿರಿಯ ಜವಾಬ್ದಾರಿ ಸಿಗಲು ಸಾಧ್ಯವಿರಲಿಲ್ಲ. ನಾಯಕರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ನಿಂಬಣ್ಣವರ, ಪ್ರದೀಪ್ ಶೆಟ್ಟರ್, ಅಮೃತ್ ದೇಸಾಯಿ, ಸಂಕನೂರು ಹಾಗೂ ಎಲ್ಲ ಕಾರ್ಯಕರ್ತರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅವರ ನೈತಿಕ ಬೆಂಬಲ ಕೇಂದ್ರ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಲು ಬಲ ತುಂಬಿದೆ’ ಎಂದರು.