ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲ. ರಸ್ತೆ ದಾಟುವಾಗ ಅಪಾಯ ಕಟ್ಟಿಟ್ಟದ್ದು. ರಸ್ತೆ ಬದಿಸಾಕಷ್ಟು ಅಂಗಡಿಗಳು, ಒಂದು ದೇವಾಲಯ ಮತ್ತು ಚರ್ಚ್ ಇವೆ. ಜನರು ಕೊಳಚೆ ನೀರು ದಾಟಿ ಹೋಗಲು ಪರದಾಡಬೇಕಿದೆ. ಬೀದಿ ದೀಪ ಇಲ್ಲದ ಈ ರಸ್ತೆಯಲ್ಲಿ ಕತ್ತಲಲ್ಲಿ ಪಾದಚಾರಿಗಳು ಜಾರಿ ಬೀಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಅಲ್ಲಿನ ಅಂಗಡಿ ಮಾಲೀಕ ರಾಹುಲ್. ಮಳೆ ಬಂದಾಗಲಂತೂ ಕೊಳಚೆ ನೀರು ಶಿವಾ ಗಾರ್ಡನ್ ಬಳಿಯ ವಸತಿ ಪ್ರದೇಶದಲ್ಲಿನ ಅನೇಕ ಮನೆಗಳಿಗೆ ನುಗ್ಗುತ್ತಿರುವುದು ಅಲ್ಲಿನ ವಾಸಿಗಳ ನಿದ್ದೆಗೆಡಿಸಿದೆ.