‘ತಿಪ್ಪಸಂದ್ರ ಮಲ್ಲೇಶಪಾಳ್ಯದ ರಮೇಶ್ ಅಯ್ಯರ್, ಮಾರತ್ತಹಳ್ಳಿ ಬಸವನಗರದ ಶರತ್, ಕನಕಪುರದ ರಸ್ತೆಯ ಮಂಜುನಾಥನಗರದ ವೆಂಕಟರಾಮು ಹಾಗೂ ಯಶವಂತಪುರದ ಪ್ರಕಾಶ್ ಬಂಧಿತರು. ಅವರೆಲ್ಲ ವ್ಯಾಪಾರಿಗಳಾಗಿದ್ದು, ತಮ್ಮ ಬಳಿ ಇದ್ದ ಹಳೇ ನೋಟುಗಳನ್ನೇ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು’ ಎಂದು ನಂದಿನಿ ಲೇಔಟ್ ಪೊಲೀಸರು ಹೇಳಿದರು.