ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋದವರೇ, ಚಾಕು ಹಿಡಿದು ಅವರನ್ನು ಸುತ್ತುವರಿದಿದ್ದಾರೆ. ಮೊದಲು ಧಮಯಂತ್ರಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ಬಳಿಕ ಉಳಿದಿಬ್ಬರ ಕುತ್ತಿಗೆ ನೋಡಿದ್ದಾರೆ. ಅವರ ಬಳಿ ಚಿನ್ನ ಕಾಣದಿದ್ದಾಗ ಅಲ್ಲಿಂದ ಹೊರಟು ಹೋಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೆ ಒಳಗಾದ ಮಹಿಳೆಯರು, ಬಳಿಕ ಆಟೊದಲ್ಲಿ ಹೆಬ್ಬಾಳ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ‘ಅವರೆಲ್ಲ ಉರ್ದು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಒಬ್ಬಾತ ಮಾತ್ರ ನಮ್ಮ ಜೊತೆ ಕನ್ನಡದಲ್ಲಿ ಮಾತನಾಡಿದ. ಕೂಗಿದರೆ ಕುತ್ತಿಗೆ ಕುಯ್ದುಬಿಡುವುದಾಗಿ ಬೆದರಿಸಿದ. ಗಾಬರಿಯಲ್ಲಿ ಬೈಕ್ಗಳ ನೋಂದಣಿ ಸಂಖ್ಯೆಯನ್ನೂ ನೋಡಲಿಲ್ಲ’ ಎಂದು ಶಂಕರಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.