ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಏಳನೆಯ ದೀಕ್ಷಾಂತ ಘಟಿಕೋತ್ಸವ ಗುರುವಾರ ನಡೆಯಿತು, ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ನಾಲ್ಕು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಗವಿಮಠಾಧೀಶ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಿ.ಲಿಟ್ ನೀಡಿ ಗೌರವಿಸಲಾಯಿತು.
2017–18 ನೇ ಸಾಲಿನ ಬಿ.ಎ ವಿದ್ವನ್ಮಧ್ಯಮಾ 318 ವಿದ್ಯಾರ್ಥಿಗಳು ಮತ್ತು ಎಂಎ ಆಚಾರ್ಯ 222 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು.
ನಗದು ಬಹುಮಾನ ಪಡೆದ ಎಂಎ ವಿದ್ಯಾರ್ಥಿಗಳು– ಶ್ವೇತ ನಂದಿನಿ, ಶ್ರೀವಲ್ಲಿ ಮಂಜುನಾಥ ಹೆಗಡೆ, ವಿನೋದ್ ಭಟ್, ಸಚಿನ್ ದ್ವಿವೇದಿ, ಜ್ಯೋತಿಷಶಾಸ್ತ್ರದ ನಗದು ಬಹುಮಾನ– ಲಲಿತಾ ಎಂ.
‘ಸಂಸ್ಕೃತ ಭಾಷೆಯಲ್ಲ ಶಕ್ತಿ’: ‘ಸಂಸ್ಕೃತ ಕೇವಲ ಭಾಷೆಯಲ್ಲ ಶಕ್ತಿ. ಪ್ರತಿಯೊಂದು ಅಕ್ಷರವೂ ಮಂತ್ರ. ದೇವಭಾಷೆಯೂ ಹೌದು, ಮಾನವೀಯ ಮೌಲ್ಯದ ಗುಣಗಳನ್ನು ಹೊಂದಿದೆ’ ಎಂದು ಘಟಿಕೋತ್ಸವ ಭಾಷಣ ಮಾಡಿದ ತುಮಕೂರಿನ ರಾಮಕೃಷ್ಣ– ವಿವೇಕಾನಂದ ಆಶ್ರಮದ ಸರಸ್ವತೀ ಸ್ವಾಮೀಜಿ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಮಾತನಾಡಿದರು.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು.