ಅಖಿಲ ಭಾರತ ಮಧ್ವಮಹಾಮಂಡಳದ ವಸತಿ ನಿಲಯದ ವಿದ್ಯಾರ್ಥಿಗಳು ಶ್ರೀಕೃಷ್ಣ ಪೂಜೆ ನೆರವೇರಿಸಿದರು. ಮಂಡಳದ ಕಾರ್ಯದರ್ಶಿ ಬಿ.ಜೆ. ಮಾಕೋಡ, ವ್ಯವಸ್ಥಾಪಕ ಪ್ರಮೋದಾಚಾರ್ಯ ಆಲೂರ, ಪಂ.ನವೀನಾಚಾರ್ಯ ಜೋಶಿ, ಸಂತೋಷ ಗದ್ದನಕೇರಿ ನೇತೃತ್ವದಲ್ಲಿ ಧನ್ವಂತರಿ ಜಪ, ಸುಳಾದಿಗಳು, ವಾಯುಸ್ತುತಿ, ವಿಷ್ಣುಸಹಸ್ರನಾಮ, ರಾಯರ ಸ್ತೋತ್ರ ಪಾರಾಯಣ ಮಾಡಲಾಯಿತು.