‘ಆ ನಂತರ ಐ–ಫೋನ್, ಐ–ಪ್ಯಾಡ್ ಹಾಗೂ ಇತರೆ ವಸ್ತುಗಳ ಖರೀದಿಗೆಂದು ಮತ್ತೆ ₹ 2 ಲಕ್ಷ ಹಾಕಿದ್ದೆ. 2017ರಲ್ಲಿ ಅನಾರೋಗ್ಯದ ನೆಪ ಹೇಳಿ ತುರ್ತು ಚಿಕಿತ್ಸೆಗೆಂದು ₹ 13 ಲಕ್ಷ ಪಡೆದುಕೊಂಡರು. ಅದೇ ವರ್ಷ ಬೆಂಗಳೂರಿಗೆ ಬಂದ ನಾನು, ಮದುವೆ ಮಾತುಕತೆಗೆಂದು ಅವರ ಮನೆಗೆ ಹೋಗಿದ್ದೆ. ಆಗ ಮುಂದಿನ ವರ್ಷ ಮದುವೆ ಮಾಡುವುದಾಗಿ ಹೇಳಿ ಕಳುಹಿಸಿದ್ದರು. ಹೀಗೆ, ಪ್ರತಿಬಾರಿ ಏನೇನೋ ಕಾರಣ ಹೇಳಿ ದಿನಾಂಕ ಮುಂದೂಡುತ್ತಿದ್ದರಿಂದ ನನಗೆ ಸಂಶಯ ಬಂತು.’