ಶರಣರಾದ ದಾನಪ್ಪ ದ್ಯಾಮನಾಳ ಕುಪ್ಪಿ ಮಾತನಾಡಿ,‘ಬಸವ ಸೇವಾ ಸಮಿತಿಯವರು ಹುಣ್ಣಿಮೆ ಪ್ರಯುಕ್ತ ನಿರಂತರವಾಗಿ ಪ್ರತಿ ಸೋಮವಾರ ಹಾಗೂ ಗುರುವಾರ ಮನೆ ಮನ ಬಸವ ಬೆಳಗು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.
ಶರಣಜೀವಿಗಳಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ನಂದಯ್ಯಸ್ವಾಮಿ, ಚಂದ್ರಕಾಂತ ಸಕ್ರಿ, ನಂದಪ್ಪ ಕುರಿ, ಪ್ರಕಾಶ ಕುಂಬಾರ, ಸೋಮಶೇಖರ ಯಾಳಗಿ, ಈರಯ್ಯಸ್ವಾಮಿ, ವೈ.ಜಿ.ಬೇವೂರ,ಬಸವರಾಜ ಗೋವಿಂದರ, ಸಂಗಣ್ಣ ದೇಸಾಯಿ, ಪ್ರಭು ಹಡಪದ, ನಾಗರಾಜ ಮಡಿವಾಳ, ಆನಂದ ಕಾತರಕಿ, ಗುರಣ್ಣ ಕುಂಬಾರ, ಸಂಗಣ್ಣ ಮಡ್ಡಿ ಹಾಗೂ ಸೋಮಶೇಖರ ಗಿಟಗಿ ಇದ್ದರು.