ಶ್ರೀನಗರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಲಾಕ್ಡೌನ್ಗೆ ಮೂರು ದಿನ ವಿನಾಯಿತಿ ನೀಡಲಾಗಿದೆ.
ಮಂಗಳವಾರದಿಂದ ಲಾಕ್ಡೌನ್ಗೆ ವಿನಾಯಿತಿ ನೀಡಲಾಗಿದ್ದು, ಈ ಮೂರು ದಿನ ಜನರು ಹಬ್ಬಕ್ಕಾಗಿ ಬೇಕಾಗಿರುವ ಸಾಮಾನುಗಳು ಸೇರಿದಂತೆ ಬಲಿ ನೀಡುವ ಪ್ರಾಣಿಗಳನ್ನು ಖರೀದಿಸಬಹುದು. ಈ ಮೂರು ದಿನ ಕೇವಲ ಖಾಸಗಿ ಸಾರಿಗೆ ವ್ಯವಸ್ಥೆಗಳಿರುತ್ತದೆ. ಆಟೊ ರಿಕ್ಷಾಗಳಿಗೂ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೆ 17,920 ಮಂದಿಗೆ ಸೋಂಕು ತಗುಲಿದೆ. 314 ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಕಳೆದ ವಾರ ಕೋವಿಡ್ ಪ್ರಸರಣವನ್ನು ನಿಯಂತ್ರಿಸಲು ಆರು ದಿನದ ಲಾಕ್ಡೌನ್ ಅನ್ನು ಹೇರಲಾಗಿತ್ತು.