‘ಬಾಬರಿ ಮಸೀದಿ ಕೆಡವಿದ್ದನ್ನು ಜಗತ್ತೇ ನೋಡಿದೆ. ಅಂದು ಅನೇಕ ‘ಯೋಧ’ರ ಮುಖಗಳು ಭಯದಿಂದ ಕಪ್ಪಾಗಿದ್ದವು. ಮಸೀದಿ ಕೆಡವಿದ್ದು ನಾವಲ್ಲ, ಶಿವಸೇನಾದವರು’ ಎಂದು ಬಿಜೆಪಿಯ ಉಪಾಧ್ಯಕ್ಷ ಸುಂದರ್ಸಿಂಗ್ ಭಂಡಾರಿ ಹೇಳಿದ್ದರು. ಆದರೆ ಬಾಳಾಸಾಹೇಬ ಠಾಕ್ರೆ ಅವರು ‘ಶಿವಸೈನಿಕರೇ ಈ ಕಾರ್ಯ ಮಾಡಿದ್ದು ನಿಜವಾಗಿದ್ದಲ್ಲಿ, ಆ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಎದೆ ತಟ್ಟಿ ಹೇಳಿಕೊಂಡಿದ್ದರು’ ಎಂದು ಶಿವಸೇನಾ ಹೇಳಿದೆ.