ನವದೆಹಲಿ: ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಆರನೇ ಆವೃತ್ತಿಯಾಗಿರುವ ‘ಸ್ವಚ್ಛ ಸರ್ವೇಕ್ಷಣೆ 2021’ಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಚಾಲನೆ ನೀಡಿದರು.
ತ್ಯಾಜ್ಯ ನೀರಿನ ಸಂಸ್ಕರಣೆ ಹಾಗೂ ಇತರ ಮಾನದಂಡಗಳ ಕಡೆಗೆ ಈ ವರ್ಷ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡುವ ಬೆಂಬಲ, ಅನುದಾನಗಳ ಬಳಕೆ ಮೊದಲಾದವುಗಳನ್ನು ಪರಿಶೀಲಿಸಿ ಸಮೀಕ್ಷೆಯು ರಾಜ್ಯಗಳಿಗೂ ಶ್ರೇಯಾಂಕ ಘೋಷಿಸಲಿದೆ ಎಂದೂ ಅವರು ತಿಳಿಸಿದ್ದಾರೆ.