ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಆಡಳಿತದಲ್ಲಿಯೂ ಜಾತ್ಯತೀತ ತತ್ವಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ನಿಜಾಮ್ ಮತ್ತು ಕುತುಬ್ ಶಾಹಿ ಆಳ್ವಿಕೆಯಲ್ಲಿಯೂ ಜಾತ್ಯತೀತತೆ ಅಸ್ತಿತ್ವದಲ್ಲಿತ್ತು. ಐತಿಹಾಸಿಕ ಚಾರ್ಮಿನಾರ್ನ ನಾಲ್ಕು ಮಿನಾರ್ಗಳು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಕೇತಗಳಾಗಿ ಕಂಡುಬರುತ್ತವೆ. ಇವೆಲ್ಲವೂ ಸಮಾನ ಗೌರವವನ್ನು ಸೂಚಿಸುತ್ತವೆ ಎಂದು ಅವರು ಪ್ರತ್ಯೇಕ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಿಜಿಪಿ ಎಂ ಮಹೇಂದರ್ ರೆಡ್ಡಿ ಅವರೊಂದಿಗೆ ಸಭೆ ನಡೆಸಿದ ಅಲಿ, ಹಸುಗಳನ್ನು ಹಿಂದೂಗಳು ಪೂಜಿಸುವುದರಿಂದ ಅವುಗಳನ್ನು ಬಲಿ ನೀಡಬಾರದು ಎಂದು ಹೇಳಿದರು. ಕುರಿ, ಮೇಕೆ ಸೇರಿದಂತೆ ಬೇರೆ ಇತರೆ ಪ್ರಾಣಿಗಳನ್ನು ಬಲಿ ಕೊಡಲು ಅವಕಾಶವಿದೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.