ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ ನೌಕರರು ಎಂದು ಹೇಳಿಕೊಂಡ ಇಬ್ಬರಿಂದ ವ್ಯಾಪಾರಿ ಮಗನ ಅಪಹರಣ

Last Updated 25 ಜುಲೈ 2020, 3:30 IST
ಅಕ್ಷರ ಗಾತ್ರ

ಲಖನೌ:'ನಾವು ಆರೋಗ್ಯ ಇಲಾಖೆ ನೌಕರರು. ಕೊರೊನಾ ಪಿಡುಗು ತಡೆಗಟ್ಟಲು ಮನೆಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುತ್ತಿದ್ದೇವೆ' ಎಂದು ಹೇಳಿಕೊಂಡ ಇಬ್ಬರು ದುಷ್ಕರ್ಮಿಗಳು ವ್ಯಾಪಾರಿಯೊಬ್ಬರ 8 ವರ್ಷದ ಮಗನನ್ನು ಅಪಹರಿಸಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ.

ಆರೋಗ್ಯ ಇಲಾಖೆ ನೌಕರರು ಎಂದು ಹೇಳಿಕೊಂಡ ಇಬ್ಬರು ಮನೆಯೊಳಗೆ ಪ್ರವೇಶಿಸಿ, ಒಂದಿಷ್ಟು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಕೊಟ್ಟರು.ಇನ್ನಷ್ಟು ಮಾಸ್ಕ್‌ಗಳು ಮತ್ತು ಸ್ಯಾನಿಟೈಸರ್‌ಗಳು ಬೇಕಿದ್ದರೆ ನಮ್ಮ ವಾಹನದ ಬಳಿಗೆ ಬರಬೇಕು ಎಂದು ಹೇಳಿದರು.

ಅವರ ಮಾತು ನಂಬಿದ ಕುಟುಂಬದ ಸದಸ್ಯರು ಬಾಲಕನನ್ನು ಅವರೊಂದಿಗೆ ಕಳುಹಿಸಿದರು. ಅದರೆ ಗಂಟೆ ಕಳೆದರೂ ಹುಡುಗ ಮನೆಗೆ ಬರಲಿಲ್ಲ. ಬದಲಿಗೆ ಒತ್ತೆ ಹಣಕ್ಕಾಗಿ ಬೆದರಿಕೆ ಕರೆ ಬಂತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

'ಅಪಹರಣಕಾರರನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆಯು ಕಾರ್ಯಪ್ರವೃತ್ತವಾಗಿದೆ' ಎಂದು ಉತ್ತರ ಪ್ರದೇಶದ ಡಿಜಿಪಿ ಎಚ್‌.ಸಿ.ಅವಸ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT