ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಅಪಹರಣ–ಕೊಲೆ: ನಾಲ್ವರು ಪೊಲೀಸರ ಅಮಾನತು

Last Updated 24 ಜುಲೈ 2020, 10:49 IST
ಅಕ್ಷರ ಗಾತ್ರ

ಲಖನೌ: ಕಾನ್ಪುರದಲ್ಲಿನ ಪ್ರಯೋಗಾಲಯದ ತಂತ್ರಜ್ಞರೊಬ್ಬರ ಅಪಹರಣ ಮತ್ತು ಹತ್ಯೆ ಕುರಿತ ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಸರ್ಕಲ್‌ ಆಫೀಸರ್‌ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

‘ಅಪಹೃತರ ಕುಟುಂಬದವರು ಒತ್ತೆ ಹಣವನ್ನು ನೀಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಎಡಿಜಿಪಿ ಬಿ.ಪಿ. ಜೋಗದಂಡ ಅವರು ತನಿಖೆ ನಡೆಸಲಿದ್ದಾರೆ’ ಎಂದೂ ಸರ್ಕಾರ ಶುಕ್ರವಾರ ಹೇಳಿದೆ.

ಕಳೆದ ತಿಂಗಳಿನಲ್ಲಿ ಲ್ಯಾಬ್‌ ತಂತ್ರಜ್ಞರೊಬ್ಬರನ್ನು ಅಪಹರಿಸಿದ್ದ ಅಪರಿಚಿತರು, ಕೆಲವೇ ದಿನಗಳಲ್ಲಿ ಅವರ ಹತ್ಯೆ ನಡೆಸಿದ್ದರು. ಅಪಹೃತರ ಬಿಡುಗಡೆಗಾಗಿ ಪೊಲಿಸರ ಸಮ್ಮುಖದಲ್ಲೇ ₹30 ಲಕ್ಷ ಒತ್ತೆ ಹಣ ನೀಡಲಾಗಿತ್ತು ಎಂದು ಅವರ ಕುಟುಂಬದವರು ಹೇಳಿದ್ದಾರೆ. ಆದರೆ, ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ ಎಂದು ಸರ್ಕಲ್‌ ಆಫೀಸರ್‌ ವಿಕಾಸ್‌ ಪಾಂಡೆ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಅವರಲ್ಲಿ ಇಬ್ಬರು ತಾವು ಈ ಕೃತ್ಯದಲ್ಲಿ ಪಾಲ್ಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಕಾನ್ಪುರದ ಎಸ್‌ಪಿ ದಿನೇಶ್‌ ಕುಮಾರ್‌ ಪ್ರಭು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT