ಕಳೆದ ತಿಂಗಳಿನಲ್ಲಿ ಲ್ಯಾಬ್ ತಂತ್ರಜ್ಞರೊಬ್ಬರನ್ನು ಅಪಹರಿಸಿದ್ದ ಅಪರಿಚಿತರು, ಕೆಲವೇ ದಿನಗಳಲ್ಲಿ ಅವರ ಹತ್ಯೆ ನಡೆಸಿದ್ದರು. ಅಪಹೃತರ ಬಿಡುಗಡೆಗಾಗಿ ಪೊಲಿಸರ ಸಮ್ಮುಖದಲ್ಲೇ ₹30 ಲಕ್ಷ ಒತ್ತೆ ಹಣ ನೀಡಲಾಗಿತ್ತು ಎಂದು ಅವರ ಕುಟುಂಬದವರು ಹೇಳಿದ್ದಾರೆ. ಆದರೆ, ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ ಎಂದು ಸರ್ಕಲ್ ಆಫೀಸರ್ ವಿಕಾಸ್ ಪಾಂಡೆ ಹೇಳಿದ್ದಾರೆ.