ಉಗ್ರನೊಬ್ಬ ಭಾರಿ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಆತ್ಮಹತ್ಯಾ ದಾಳಿ ನಡೆಸಿದ್ದರಿಂದ, ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ 25 ಜನರು ಮೃತಪಟ್ಟು, 8 ಜನರು ಗಾಯಗೊಂಡಿದ್ದಾರೆ. ‘ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಕೋವಿಡ್ ಪಿಡುಗಿನಿಂದ ತತ್ತರಿಸಿವೆ. ಇಂತಹ ಹೊತ್ತಿನಲ್ಲಿಯೇ ನಡೆದಿರುವ ಉಗ್ರರ ದಾಳಿ, ಹಲವು ದೇಶಗಳನ್ನು ಮತ್ತಷ್ಟೂ ಸಂಕಷ್ಟಕ್ಕೆ ದೂಡುತ್ತದೆ. ಮಾನವೀಯ ನೆಲೆಗಟ್ಟಿನ ಮೇಲೆ ಎಲ್ಲರೂ ಒಂದೇ ಎಂಬ ಮನೋಭಾವ ಈಗ ಅಗತ್ಯ’ ಎಂದು ಯುನೈಟೆಡ್ ನೇಷನ್ಸ್ ಅಲೈಯನ್ಸ್ ಆಫ್ ಸಿವಿಲೈಜೇಷನ್ಸ್ನ (ಯುಎನ್ಎಒಸಿ) ಉನ್ನತಾಧಿಕಾರಿ ಮಿಗೆಲ್ ಏಂಜೆಲ್ ಮೊರಾಟಿನೋಸ್ ಹೇಳಿದ್ದಾರೆ.