ಆದೇಶದಲ್ಲೇನಿತ್ತು? : ತ್ರಿಸದಸ್ಯ ಪೀಠದ 167 ಪುಟಗಳ ವಿಸ್ತೃತ ಆದೇಶದಲ್ಲಿ ‘ಅಪರಾಧಿಯನ್ನು ನೇಣಿಗೆ ಹಾಕಬೇಕು. ನಂತರ ಮೃತದೇಹವನ್ನು ಇಸ್ಲಾಮಾಬಾದ್ ಡಿ–ಚೌಕ್ಗೆ ಎಳೆದೊಯ್ದು 3 ದಿನ ನೇತುಹಾಕಬೇಕು’ ಎಂದು ಪೇಶಾವರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಕಾರ್ ಅಹಮ್ಮದ್ ಸೇಠ್ ಉಲ್ಲೇಖಿಸಿದ್ದರು.ಈ ಆದೇಶ ಹೊರಬಿದ್ದ ತಕ್ಷಣವೇ ಕಾನೂನು ಸಲಹೆಗಾರರ ಜೊತೆ ಸಭೆ ನಡೆಸಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಈ ಆದೇಶ ಪ್ರಶ್ನಿಸಲು ಸಭೆಯಲ್ಲಿ ನಿರ್ಧರಿಸಿದ್ದರು.