<p><strong>ಟೆಹರಾನ್</strong>: ಉಕ್ರೇನ್ನ ನಾಗರಿಕ ವಿಮಾನ ಪತನ ಕುರಿತು ರೆವಲ್ಯೂಷನರಿ ಗಾರ್ಡ್ಸ್ನ ಮುಖ್ಯಸ್ಥ ಮೇಜರ್ ಜನರಲ್ ಹೊಸೆನ್ ಸಲಾಮಿ ಅವರು ಭಾನುವಾರ ಇರಾನ್ನ ಸಂಸತ್ಗೆ ವಿವರಣೆ ನೀಡಿದ್ದಾರೆ.</p>.<p>ಜನವರಿ 3ರಂದು ಬಾಗ್ದಾದ್ನಲ್ಲಿ ಅಮೆರಿಕ ಪಡೆಗಳು ಯಾವ ರೀತಿಯಲ್ಲಿ ಡ್ರೋನ್ ದಾಳಿ ನಡೆಸಿ ಕಮಾಂಡರ್ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ಮಾಡಿವೆ ಎಂಬುದನ್ನು ಅವರು ಸಂಸತ್ನಲ್ಲಿ ವಿವರಿಸಿದ್ದಾರೆ ಎಂದು ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<p>ಪ್ರತೀಕಾರವಾಗಿ ಇರಾಕ್ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.</p>.<p>ವಿಮಾನ ಪತನಕ್ಕೆ ಕಾರಣವಾದ ಪ್ರಮಾದದ ಬಗ್ಗೆ ವಿವರಣೆ ನೀಡುವಂತೆ ಸಂಸತ್ನಲ್ಲಿ ಸ್ಪೀಕರ್ ಅಲಿ ಲರಿಜಾನಿ ಅವರು ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗಕ್ಕೆ ಸೂಚಿಸಿದ್ದಾರೆ.</p>.<p>ಉಕ್ರೇನ್ನ ವಿಮಾನ ಪತನದ ಹೊಣೆ ಹೊತ್ತುಕೊಂಡ ಇರಾನ್ ಶನಿವಾರ ಕ್ಷಮೆ ಯಾಚಿಸಿತ್ತು. ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು, ಅದು ವಿಮಾನವನ್ನು ಹೊಡೆದುರುಳಿಸಿದೆ ಎಂದೂ ಹೇಳಿತ್ತು.</p>.<p>ವಿಮಾನ ದುರಂತದಲ್ಲಿ ಇರಾನ್ ಮತ್ತು ಕೆನಡಾ ಪ್ರಜೆಗಳು ಸೇರಿದಂತೆ 176 ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್</strong>: ಉಕ್ರೇನ್ನ ನಾಗರಿಕ ವಿಮಾನ ಪತನ ಕುರಿತು ರೆವಲ್ಯೂಷನರಿ ಗಾರ್ಡ್ಸ್ನ ಮುಖ್ಯಸ್ಥ ಮೇಜರ್ ಜನರಲ್ ಹೊಸೆನ್ ಸಲಾಮಿ ಅವರು ಭಾನುವಾರ ಇರಾನ್ನ ಸಂಸತ್ಗೆ ವಿವರಣೆ ನೀಡಿದ್ದಾರೆ.</p>.<p>ಜನವರಿ 3ರಂದು ಬಾಗ್ದಾದ್ನಲ್ಲಿ ಅಮೆರಿಕ ಪಡೆಗಳು ಯಾವ ರೀತಿಯಲ್ಲಿ ಡ್ರೋನ್ ದಾಳಿ ನಡೆಸಿ ಕಮಾಂಡರ್ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ಮಾಡಿವೆ ಎಂಬುದನ್ನು ಅವರು ಸಂಸತ್ನಲ್ಲಿ ವಿವರಿಸಿದ್ದಾರೆ ಎಂದು ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<p>ಪ್ರತೀಕಾರವಾಗಿ ಇರಾಕ್ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.</p>.<p>ವಿಮಾನ ಪತನಕ್ಕೆ ಕಾರಣವಾದ ಪ್ರಮಾದದ ಬಗ್ಗೆ ವಿವರಣೆ ನೀಡುವಂತೆ ಸಂಸತ್ನಲ್ಲಿ ಸ್ಪೀಕರ್ ಅಲಿ ಲರಿಜಾನಿ ಅವರು ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗಕ್ಕೆ ಸೂಚಿಸಿದ್ದಾರೆ.</p>.<p>ಉಕ್ರೇನ್ನ ವಿಮಾನ ಪತನದ ಹೊಣೆ ಹೊತ್ತುಕೊಂಡ ಇರಾನ್ ಶನಿವಾರ ಕ್ಷಮೆ ಯಾಚಿಸಿತ್ತು. ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು, ಅದು ವಿಮಾನವನ್ನು ಹೊಡೆದುರುಳಿಸಿದೆ ಎಂದೂ ಹೇಳಿತ್ತು.</p>.<p>ವಿಮಾನ ದುರಂತದಲ್ಲಿ ಇರಾನ್ ಮತ್ತು ಕೆನಡಾ ಪ್ರಜೆಗಳು ಸೇರಿದಂತೆ 176 ಮಂದಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>