ವಿವರ: ಇಲ್ಲಿನ ಬೋಧಕ ಬೋನಿಫೇಸ್ ಮಾಂಪೋಸಾ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತಮ್ಮನ್ನು ಧರ್ಮಪ್ರಚಾರಕ ಎಂದು ಸ್ವಯಂ ಘೋಷಿಸಿಕೊಂಡಿರುವ ಮಾಂಪೋಸಾ, ಎಣ್ಣೆಯನ್ನು ನೆಲದ ಮೇಲೆ ಸುರಿದು, ‘ಅದು ಅಭಿಷೇಕದ ಪವಿತ್ರ ಎಣ್ಣೆಯಾಗಿದೆ. ಇದನ್ನು ಸೇವಿಸಿದರೆ ಮತ್ತು ಹಚ್ಚಿಕೊಂಡರೆ ಅನಾರೋಗ್ಯದಿಂದ ಬಳಲುತ್ತಿರುವವರು ಗುಣಮುಖರಾಗಲಿದ್ದಾರೆ’ ಎಂದು ಹೇಳಿದರು.