‘ಕೊರೊನಾ ವೈರಸ್ ಮತ್ತು ಲಾಕ್ಡೌನ್ನಿಂದ ತೊಂದರೆಗೊಳಗಾಗಿರುವ ಈ ಕಾಲದಲ್ಲಿ, ಜನರು ಆತಂಕಕ್ಕೊಳಗಾಗುವುದು ಅಥವಾ ಅವರ ಶಾಂತಿಗೆ ಭಂಗವಾಗುವುದು ಸಹಜ. ಶಾಂತಿ ಮಂತ್ರವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಿದೆ. ಇದು ಶಾಂತಿಯನ್ನು ಕೋರುವ ಹಿಂದೂ ಪ್ರಾರ್ಥನೆ. ಯಜುರ್ವೇದ ಮೂಲದ ವೈದಿಕ ಮಂತ್ರ’ ಎಂದು ವೈಟ್ ಹೌಸ್ನ ರೋಸ್ ಗಾರ್ಡನ್ನಲ್ಲಿ ಹರೀಶ್ ಬ್ರಹ್ಮಭಟ್ ಹೇಳಿದ್ದಾರೆ.
ಪ್ರಾರ್ಥನೆ, ಮಂತ್ರ ಪಠಣೆಗಾಗಿ ಟ್ರಂಪ್ ಅವರು ಹರೀಶ್ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದರು.