<p><strong>ಬೆಂಗಳೂರು</strong>: ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಕೆಲಸ ನಿರ್ವಹಿಸುತ್ತಿರುವ ತೂಕ ದಾಖಲಾತಿದಾರರ ಕನಿಷ್ಠ ವೇತನದ ಕನಸು 24 ವರ್ಷಗಳಿಂದ ಕನಸಾಗಿಯೇ ಉಳಿದಿದೆ.</p>.<p>ರಾಜ್ಯದ 150 ಎಪಿಎಂಸಿಗಳಲ್ಲಿ 1,400ಕ್ಕೂ ಹೆಚ್ಚಿದ್ದ ತೂಕ ದಾಖಲಾತಿದಾರರ ಸಂಖ್ಯೆ ಈಗ 900ಕ್ಕೆ ಇಳಿದಿದೆ. ತಿಂಗಳಿಗೆ ₹400 ವೇತನದಿಂದ ಕೆಲಸ ಆರಂಭಿಸಿದ ಇವರು ಕನಿಷ್ಠ ವೇತನಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ.</p>.<p>ಎಪಿಎಂಸಿಯು ಸುಂಕದ ಜತೆಗೆ ತೂಕದವರ ಶುಲ್ಕವನ್ನೂ ಸಂಗ್ರಹಿಸುತ್ತದೆ. ತೂಕದವರ ಕಲ್ಯಾಣ ನಿಧಿಗೆ ಆ ಹಣ ವರ್ಗಾಯಿಸಿ ಅದರ ಮೂಲಕ ವೇತನ ಪಾವತಿಸಲಾಗುತ್ತಿದೆ.</p>.<p>ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನಿಗದಿ ಮಾಡಬೇಕು ಎಂಬ ಹೋರಾಟವನ್ನು ತೂಕದವರು 30 ವರ್ಷಗಳ ಹಿಂದೆಯೇ ಆರಂಭಿಸಿದ್ದರು. ಕನಿಷ್ಠ ವೇತನ ನೀಡಬೇಕು ಎಂದು ಹೈಕೋರ್ಟ್ 1996ರಲ್ಲಿ ಆದೇಶಿಸಿತು.ಆದರೆ, ಅದು ಈವರೆಗೆ ಪಾಲನೆಯಾಗಿಲ್ಲ.</p>.<p>‘ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಪ್ರಕಾರ ತಿಂಗಳಿಗೆ ₹12,500 ವೇತನ ನಿಗದಿ ಮಾಡಬೇಕು. ಯಶವಂತಪುರ ಎಪಿಎಂಸಿಯ 15 ಜನರಿಗೆ ಮಾತ್ರ ಈ ವೇತನ ಸಿಗುತ್ತಿದೆ. ಉಳಿದವರಿಗೆ ₹3 ಸಾವಿರದಿಂದ ₹7 ಸಾವಿರದ ತನಕ ವೇತನ ಸಿಗುತ್ತಿದೆ. ಒಂದೊಂದು ಎಪಿಎಂಸಿಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ’ ಎಂದು ತೂಕ ದಾಖಲಾತಿದಾರರ ಸಂಘದ ಅಧ್ಯಕ್ಷ ಯು. ಮಲ್ಲಿಕಾರ್ಜುನಪ್ಪ ಹೇಳಿದರು.</p>.<p>‘ಕಾರ್ಮಿಕ ಕಾಯ್ದೆ ಪ್ರಕಾರಪಿಎಫ್, ಇಎಸ್ಐ, ಗ್ರಾಚ್ಯುಟಿ ಸೇರಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ನೀಡಬೇಕು ಎಂದು ಕೋರ್ಟ್ ಹೇಳಿದೆ. ಆದರೆ, ಕನಿಷ್ಠ ವೇತನಕ್ಕೆ ಸಮನಾದ ವೇತನ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಎಪಿಎಂಸಿ ಅಧಿಕಾರಿಗಳು, ಅದನ್ನೂ ಈವರೆಗೂ ನೀಡಿಲ್ಲ’ ಎಂದು ಅವರು ತಿಳಿಸಿದರು.</p>.<p class="Briefhead"><strong>‘ಯಾರ ಆದೇಶಕ್ಕೂ ಬೆಲೆ ಇಲ್ಲ’</strong></p>.<p>‘ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕನಿಷ್ಠ ವೇತನ ನೀಡಬೇಕು ಎಂದು ಆದೇಶಿಸಿದ್ದರು. ಕನಿಷ್ಠ ವೇತನ ನೀಡುವಂತೆ ಸೂಚಿಸಿ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರೂ ಇತ್ತೀಚೆಗೆ ಸುತ್ತೊಲೆ ಹೊರಡಿಸಿದ್ದಾರೆ. ಆದರೆ, ಎಪಿಎಂಸಿಗಳ ಯಾವೊಬ್ಬ ಕಾರ್ಯದರ್ಶಿಯೂ ಈ ಆದೇಶಗಳನ್ನು ಪಾಲಿಸಿಲ್ಲ’ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.</p>.<p>‘ಮೇಲಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ಎಪಿಎಂಸಿ ಕಾರ್ಯದರ್ಶಿಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪ್ರಶ್ನೆ ಮಾಡಿದವರ ವಿರುದ್ಧ ಸಲ್ಲದ ಆರೋಪಗಳನ್ನು ಹೊರಿಸಿ ಕೆಲಸದಿಂದಲೇ ತೆಗೆದು ಹಾಕುತ್ತಿದ್ದಾರೆ’ ಎಂದರು.</p>.<p>‘ಅಧಿಕಾರಿಗಳು ದುರುದ್ದೇಶದಿಂದ ನಮಗೆ ಕನಿಷ್ಠ ವೇತನ ಸಿಗದಂತೆ ಮಾಡುತ್ತಿದ್ದಾರೆ. ನ್ಯಾಯಾಲಯ, ಕಾರ್ಮಿಕ ಇಲಾಖೆ, ಮುಖ್ಯಮಂತ್ರಿ ಆದೇಶಗಳಿಗೂ ಈ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ’ ಎಂದು ಹೇಳಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಕೆಲಸ ನಿರ್ವಹಿಸುತ್ತಿರುವ ತೂಕ ದಾಖಲಾತಿದಾರರ ಕನಿಷ್ಠ ವೇತನದ ಕನಸು 24 ವರ್ಷಗಳಿಂದ ಕನಸಾಗಿಯೇ ಉಳಿದಿದೆ.</p>.<p>ರಾಜ್ಯದ 150 ಎಪಿಎಂಸಿಗಳಲ್ಲಿ 1,400ಕ್ಕೂ ಹೆಚ್ಚಿದ್ದ ತೂಕ ದಾಖಲಾತಿದಾರರ ಸಂಖ್ಯೆ ಈಗ 900ಕ್ಕೆ ಇಳಿದಿದೆ. ತಿಂಗಳಿಗೆ ₹400 ವೇತನದಿಂದ ಕೆಲಸ ಆರಂಭಿಸಿದ ಇವರು ಕನಿಷ್ಠ ವೇತನಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ.</p>.<p>ಎಪಿಎಂಸಿಯು ಸುಂಕದ ಜತೆಗೆ ತೂಕದವರ ಶುಲ್ಕವನ್ನೂ ಸಂಗ್ರಹಿಸುತ್ತದೆ. ತೂಕದವರ ಕಲ್ಯಾಣ ನಿಧಿಗೆ ಆ ಹಣ ವರ್ಗಾಯಿಸಿ ಅದರ ಮೂಲಕ ವೇತನ ಪಾವತಿಸಲಾಗುತ್ತಿದೆ.</p>.<p>ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನಿಗದಿ ಮಾಡಬೇಕು ಎಂಬ ಹೋರಾಟವನ್ನು ತೂಕದವರು 30 ವರ್ಷಗಳ ಹಿಂದೆಯೇ ಆರಂಭಿಸಿದ್ದರು. ಕನಿಷ್ಠ ವೇತನ ನೀಡಬೇಕು ಎಂದು ಹೈಕೋರ್ಟ್ 1996ರಲ್ಲಿ ಆದೇಶಿಸಿತು.ಆದರೆ, ಅದು ಈವರೆಗೆ ಪಾಲನೆಯಾಗಿಲ್ಲ.</p>.<p>‘ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಪ್ರಕಾರ ತಿಂಗಳಿಗೆ ₹12,500 ವೇತನ ನಿಗದಿ ಮಾಡಬೇಕು. ಯಶವಂತಪುರ ಎಪಿಎಂಸಿಯ 15 ಜನರಿಗೆ ಮಾತ್ರ ಈ ವೇತನ ಸಿಗುತ್ತಿದೆ. ಉಳಿದವರಿಗೆ ₹3 ಸಾವಿರದಿಂದ ₹7 ಸಾವಿರದ ತನಕ ವೇತನ ಸಿಗುತ್ತಿದೆ. ಒಂದೊಂದು ಎಪಿಎಂಸಿಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ’ ಎಂದು ತೂಕ ದಾಖಲಾತಿದಾರರ ಸಂಘದ ಅಧ್ಯಕ್ಷ ಯು. ಮಲ್ಲಿಕಾರ್ಜುನಪ್ಪ ಹೇಳಿದರು.</p>.<p>‘ಕಾರ್ಮಿಕ ಕಾಯ್ದೆ ಪ್ರಕಾರಪಿಎಫ್, ಇಎಸ್ಐ, ಗ್ರಾಚ್ಯುಟಿ ಸೇರಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ನೀಡಬೇಕು ಎಂದು ಕೋರ್ಟ್ ಹೇಳಿದೆ. ಆದರೆ, ಕನಿಷ್ಠ ವೇತನಕ್ಕೆ ಸಮನಾದ ವೇತನ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಎಪಿಎಂಸಿ ಅಧಿಕಾರಿಗಳು, ಅದನ್ನೂ ಈವರೆಗೂ ನೀಡಿಲ್ಲ’ ಎಂದು ಅವರು ತಿಳಿಸಿದರು.</p>.<p class="Briefhead"><strong>‘ಯಾರ ಆದೇಶಕ್ಕೂ ಬೆಲೆ ಇಲ್ಲ’</strong></p>.<p>‘ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕನಿಷ್ಠ ವೇತನ ನೀಡಬೇಕು ಎಂದು ಆದೇಶಿಸಿದ್ದರು. ಕನಿಷ್ಠ ವೇತನ ನೀಡುವಂತೆ ಸೂಚಿಸಿ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರೂ ಇತ್ತೀಚೆಗೆ ಸುತ್ತೊಲೆ ಹೊರಡಿಸಿದ್ದಾರೆ. ಆದರೆ, ಎಪಿಎಂಸಿಗಳ ಯಾವೊಬ್ಬ ಕಾರ್ಯದರ್ಶಿಯೂ ಈ ಆದೇಶಗಳನ್ನು ಪಾಲಿಸಿಲ್ಲ’ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.</p>.<p>‘ಮೇಲಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ಎಪಿಎಂಸಿ ಕಾರ್ಯದರ್ಶಿಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪ್ರಶ್ನೆ ಮಾಡಿದವರ ವಿರುದ್ಧ ಸಲ್ಲದ ಆರೋಪಗಳನ್ನು ಹೊರಿಸಿ ಕೆಲಸದಿಂದಲೇ ತೆಗೆದು ಹಾಕುತ್ತಿದ್ದಾರೆ’ ಎಂದರು.</p>.<p>‘ಅಧಿಕಾರಿಗಳು ದುರುದ್ದೇಶದಿಂದ ನಮಗೆ ಕನಿಷ್ಠ ವೇತನ ಸಿಗದಂತೆ ಮಾಡುತ್ತಿದ್ದಾರೆ. ನ್ಯಾಯಾಲಯ, ಕಾರ್ಮಿಕ ಇಲಾಖೆ, ಮುಖ್ಯಮಂತ್ರಿ ಆದೇಶಗಳಿಗೂ ಈ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ’ ಎಂದು ಹೇಳಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>