ಯಡಿಯೂರಪ್ಪ ವಿರೋಧಿ ಬಣದ ಗುರುತಿಸಿಕೊಂಡ ಕಾರಣಕ್ಕೆ ಹಿಂದೆ ಪಕ್ಷದ ಪ್ರಮುಖ ಹುದ್ದೆಗಳನ್ನು ಕಳೆದುಕೊಂಡಿದ್ದ ಹಲವರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿದೆ. ಈ ಪೈಕಿ ಎಂ.ಬಿ. ಭಾನುಪ್ರಕಾಶ್, ಎ.ಎಚ್. ಶಿವಯೋಗಿ ಸ್ವಾಮಿ ಅವರಿಗೆ ಪ್ರಕೋಷ್ಠಗಳ ಸಂಯೋಜಕ ಹುದ್ದೆ ನೀಡಲಾಗಿದೆ. ನಿರ್ಮಲ್ ಕುಮಾರ್ ಸುರಾನಾ, ಎಂ.ಬಿ.ನಂದೀಶ್, ಸಿದ್ದರಾಜು, ಮಹೇಶ್ ಟೆಂಗಿನಕಾಯಿ, ತುಳಸಿ ಮುನಿರಾಜುಗೌಡ, ಕೇಶವಪ್ರಸಾದ್ ಇವರಿಗೆ ಈಗ ಅವಕಾಶ ಸಿಕ್ಕಿದ್ದು, ಈ ಎಲ್ಲರೂ ಸಂತೋಷ್ ಜತೆ ಗುರುತಿಸಿಕೊಂಡಿರುವ ಪ್ರಮುಖರು ಎಂದು ಪಕ್ಷದ ಮೂಲಗಳು ಹೇಳಿವೆ.