ಆಶಾ ಕಾರ್ಯಕರ್ತೆ ಗೌರಮ್ಮ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಆಹಾರ ಕಿಟ್ ನೀಡಿರುವ ಯೋಧ ಗುರುವಿನ ಪತ್ನಿ ಕಲಾವತಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹುತಾತ್ಮ ಯೋಧ ಎಚ್.ಗುರು ಪತ್ನಿ ಕಲಾವತಿ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು. ಪಿಎಸ್ಐ ಶೇಷಾದ್ರಿ ಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಸಂದೀಪ್ ಕೊರೆ, ಡಾ. ಮೋಹನ್ ಬಾಬು, ಆರೋಗ್ಯಾಧಿಕಾರಿ ಕೃಷ್ಣೇಗೌಡ, ಪಿಡಿಒ ಸುಧಾ, ಅರವಿಂದ್, ಜಯಮ್ಮ, ಶಿವಣ್ಣ ಇದ್ದರು.