ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ, ‘ನಾನೇ ಖುದ್ದಾಗಿ ಶರ್ಮಾ ಅವರನ್ನು ಭೇಟಿಯಾಗಿದ್ದೆ. ಬೆದರಿಕೆ ಕರೆಗಳು ನೇರವಾಗಿ ನನಗೆ ಬಂದಿಲ್ಲ. ಆದರೆ, ನನ್ನ ಕೆಲವು ಭಕ್ತರಿಗೆ ಬಂದಿವೆ. ಅಗತ್ಯವಿದ್ದರೆ ರಕ್ಷಣೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಅವರು ದೂರು ಕೊಟ್ಟಿಲ್ಲ’ ಎಂದು ತಿಳಿಸಿದರು.