ರಾಷ್ಟ್ರದ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಬ್ಬಾಳಿಕೆ ನಡೆಯುತ್ತಿದೆ. ಬಿಜೆಪಿಯ ಮಾತೃಸಂಸ್ಥೆಯಾದ ಆರ್ಎಸ್ಎಸ್ ಎಂಬ ಸಂಸ್ಥೆಯಿದೆ. ಇದು ರಾಷ್ಟ್ರದಲ್ಲಿರುವ ಏಕೈಕ ಸಂಸ್ಥೆ ಎಂಬ ಭ್ರಮೆಯಲ್ಲಿದೆ. ಇಂತಹ ಯಾವುದೇ ವ್ಯವಸ್ಥಿತ ಆಲೋಚನೆ ದೇಶವನ್ನು ಭೇದಿಸುವುದಿಲ್ಲ. ಅಲ್ಲದೇ ಕಾಂಗ್ರೆಸ್ ದೇಶದಲ್ಲಿ ಯಾವುದೇ ಹಿಡಿತಕ್ಕೊಳಪಡದ ಸ್ವತಂತ್ರ ಸಂಸ್ಥೆಗಳ ನಿರ್ಮಾಣದಲ್ಲಿ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.