ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಯ ಮುನ್ನಾದಿನವಾದ ಮಂಗಳವಾರ ರಾತ್ರಿ 8 ಗಂಟೆಗೆದೇಶವನ್ನು ಉದ್ದೇಶಿಸಿ ಮಾತನಾಡಿ, ದೇಶವ್ಯಾಪಿ ಲಾಕ್ಡೌನ್ ವಿಧಿಸುವ ನಿರ್ಧಾರ ಪ್ರಕಟಿಸಿದರು. ಕಳೆದ ಗುರುವಾರ (ಮಾರ್ಚ್ 19) ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಭಾನುವಾರ (ಮಾರ್ಚ್ 22) ಜನತಾ ಕರ್ಫ್ಯೂ ಮಾಡಬೇಕು ಎಂದು ವಿನಂತಿಸಿದ್ದರು. ಅದಾದ ನಂತರ ಮತ್ತೊಮ್ಮೆ ದೇಶದ ಎದುರು ಬಂದ ಪ್ರಧಾನಿ, 'ನಿಮ್ಮ ಕುಟುಂಬದ ಸದಸ್ಯನಾಗಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಮನೆಯಲ್ಲಿಯೇ ಇರಿ' ಎಂದು ಕೈಮುಗಿದು ಪ್ರಾರ್ಥಿಸಿ, ದೇಶವ್ಯಾಪಿ ಲಾಕ್ಡೌನ್ ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದರು.