ಮುಂಬೈ/ಪುಣೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ವಾಣಿಜ್ಯನಗರಿ ಮುಂಬೈ ಮತ್ತು ಪುಣೆ ತತ್ತರಿಸಿವೆ. ಮಳೆಯಿಂದಾದ ಅನಾಹುತಗಳಲ್ಲಿ ಈ ವರೆಗೆಅಲ್ಲಿ 21 ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಮಲದ್ ಪೂರ್ವ ವಲಯದ ಪಿಂಪ್ರಿಪಾದ ಎಂಬಲ್ಲಿ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತ ಉಂಟಾಯಿತು. ಘಟನೆಯಲ್ಲಿ 13 ಮಂದಿ ಅಸುನೀಗಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಬೃಹನ್ ಮುಂಬೈ ಪಾಲಿಕೆ ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ.
Brihanmumbai Municipal Corporation (BMC): 13 people died in the retaining wall collapse of few hutments built on a hill slope in Kurar Village . Fire Brigade & NDRF had rushed to the spot. #Maharashtra pic.twitter.com/Geb3Pdnk2r
— ANI (@ANI) July 2, 2019
ಇದೇ ವೇಳೆ ಪುಣೆಯಲ್ಲಿಯೂ ಮಳೆ ಅಬ್ಬರಿಸುತ್ತಿದೆ. ರಾತ್ರಿ 1.15ರ ಸುಮಾರಿನಲ್ಲಿ ಭಾರಿ ಮಳೆಯಿಂದಾಗಿ ಅಂಬೆಗಾನ್ ಎಂಬಲ್ಲಿರುವ ಶಿಂಗದ್ ಕಾಲೇಜಿನ ಕಾಂಪೌಡ್ ಕುಸಿದಿದೆ. ಅವಶೇಷಗಳಿಸಿಲುಕಿ 6 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ, ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸಾವಿಗೀಡಾಗಿದ್ದಾರೆ.
Pune: At least 6 people have lost their lives after a wall of Sinhgad College, Ambegaon collapsed at around 1:15 am today. (Early visuals) #Maharashtra pic.twitter.com/JYiwbWpQzR
— ANI (@ANI) July 2, 2019
ಮಲದ್ ಗೋಡೆ ಕುಸಿತದಿಂದಾದ ಸಾವು ನೋವಿನ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಬೇಸರ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
Maharashtra CM Devendra Fadnavis: Pained to know about the loss of lives in Malad Wall Collapse incidence. My thoughts are with families who lost loved ones & prayers for speedy recovery of injured. Rs 5 lakh will be given to the kin of deceased. (File pic) pic.twitter.com/31bjg4SSeP
— ANI (@ANI) July 2, 2019
ಮುಂದಿನ ಕೆಲ ಗಂಟೆಗಳಲ್ಲಿ ಪುಣೆಯಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಚ್ಚರದಿಂದ ಇರುವಂತೆ ಪುಣೆ ಪಾಲಿಕೆಯು ನಾಗರಿಕರಲ್ಲಿ ಮನವಿ ಮಾಡಿದೆ. ಹೆಚ್ಚಾಗಿ ಹೊರಗೆ ಓಡಾಡದಂತೆಯೂ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆಯೂ, ಅಪಾಯ ಎದುರಾದ ಸನ್ನಿವೇಶದಲ್ಲಿ ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದವನ್ನು ಸಂಪರ್ಕಿಸುವಂತೆ ಪಾಲಿಕೆ ಕೋರಿದೆ.
ವಾಣಿಜ್ಯನಗರಿಯಲ್ಲಿ ಸುರಿಯುತ್ತಿರುವ ಜೋರು ಮಳೆಯು ರೈಲು ಸಂಚಾರವನ್ನು ಅಸ್ತವ್ಯವಸ್ತಗೊಳಿಸಿದೆ. ಹೀಗಾಗಿ ಮುಂಬೈ–ಪುಣೆ ನಡುವಣ ರೈಲು ಸಂಚಾರವನ್ನು ಸಂಪೂರ್ಣ ರದ್ದು ಮಾಡಲಾಗಿದೆ.
Maharashtra: Brihanmumbai Municipal Corporation (BMC) issues railway traffic update. #MumbaiRains pic.twitter.com/zJlvwI3FZT
— ANI (@ANI) July 2, 2019
GM CR & WR along with other senior officials is personally monitoring situation from Central Control Room pic.twitter.com/9zNyJiizyY
— Central Railway (@Central_Railway) July 1, 2019
ಇನ್ನೊಂದೆಡೆ, ಮಳೆಯಿಂದಾಗಿ ವಿಮಾನಗಳ ಹಾರಾಟಕ್ಕೂ ತೊಂದರೆಯಾಗುತ್ತಿದೆ. ಸೋಮವಾರ ಜೈಪುರದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವೊಂದು, ರನ್ವೇಯಿಂದದ ಹೊರ ಜಾರಿತು. ಅದೃಷ್ಟವಶಾತ್, ಘಟನೆಯಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ.
ಮಳೆಯಿಂದಾಗಬಹುದಾದ ಅನಾಹುತಗಳನ್ನು ತಡೆಯುವ ಸಲುವಾಗಿ ಮುಂಬೈನಲ್ಲಿ ಎರಡು ದಿನಗಳ ಕಾಲ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಮುಂಬೈನಲ್ಲಿ ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯೂ ದಶಕಗಳಲ್ಲೇ ದಾಖಲೆ ಪ್ರಮಾಣದ್ದಾಗಿದೆ.
#Maharashtra : Water logging inside Vakola police station in Mumbai following heavy rainfall in the city. #MumbaiRains pic.twitter.com/ekL16lSyYq
— ANI (@ANI) July 2, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.