ಹೈದರಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ದೇವಾಲಯದಿಂದ 12 ಪುರಾತನ ಪಂಚಲೋಹ ವಿಗ್ರಹಗಳನ್ನು ಕಳವುಗೈದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್. ರಾಮ್, ಕೆ.ಸಂತೋಷ್ ಮತ್ತು ವಿ. ಜಾನ್ ಬಂಧಿತರು. ಇವರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹3 ಕೋಟಿ ಬೆಳೆಬಾಳುವ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಕತೀಯರ ಕಾಲಕ್ಕೆ ಸೇರಿದ್ದು ಎನ್ನಲಾದ ಶ್ರೀರಾಮ, ಸೀತೆ, ಲಕ್ಷಣ ಹಾಗೂ ಇತರ 9 ವಿಗ್ರಹಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ರಾಮಾಲಯಂ ದೇವಾಲಯದಿಂದ ಕಳವುಗೈದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.