<p><strong>ಜೈಪುರ:</strong> ಜೈಪುರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿ ಬುಧವಾರ ತೀರ್ಪು ನೀಡಿದ್ದು, ಒಬ್ಬರನ್ನು ಖುಲಾಸೆಗೊಳಿಸಿದೆ.</p>.<p>ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯೂ ಸೇರಿ ವಿವಿಧ ಪ್ರಕರಣಗಳಡಿ ಈ ನಾಲ್ವರ ವಿರುದ್ಧದ ಆರೋಪಗಳು ಸಾಬೀತಾಗಿವೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಗುರುವಾರ ಪ್ರಕಟಿಸಲಿದೆ.</p>.<p>2008ರಲ್ಲಿ ಎಂಟು ಜನನಿಬಿಡ ಸ್ಥಳಗಳಲ್ಲಿ 25 ನಿಮಿಷಗಳ ಅಂತರದಲ್ಲಿ ಬಾಂಬ್ಗಳು ಸ್ಫೋಟಿಸಿದ್ದವು. 72 ಜನರು ಬಲಿಯಾಗಿದ್ದು, 170 ಜನರು ಗಾಯಗೊಂಡಿದ್ದರು. 11 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.</p>.<p>ಮೊಹಮ್ಮದ್ ಸೈಫ್, ಸರ್ವರ್ ಅಜಾಮಿ, ಸೈಫ್ ಉರ್ ರೆಹಮಾನ್, ಸಲ್ಮಾನ್ ಶಿಕ್ಷೆಗೆ ಗುರಿಯಾದವರು. 5ನೇ ಆರೋಪಿ ಶಹಬಾಜ್ ಹುಸೇನ್ವಿರುದ್ಧದ ಎಲ್ಲ ಎಂಟು ಆರೋಪಗಳಿಂದ ಕೋರ್ಟ್ ಖುಲಾಸೆಗೊಳಿಸಿತು.</p>.<p class="Subhead"><strong>ಖುಲಾಸೆ ಏಕೆ?:</strong> ಅಮಿಕಸ್ ಕ್ಯೂರಿ ಸುರೇಶ್ ವ್ಯಾಸ್ ಪ್ರಕಾರ, ‘ಶಹಬಾಜ್ ಹುಸೇನ್ ವಿರುದ್ಧ ದಾಖಲಿಸಿದ್ದ ಇ–ಮೇಲ್ ಕಳುಹಿಸಿದ್ದ, ಸ್ಫೋಟ ಪ್ರಕರಣದ ಹೊಣೆ ಹೊತ್ತಿದ್ದು ಸೇರಿದಂತೆ ಆರೋಪಗಳನ್ನು ಸಾಬೀತುಪಡಿಸಲು ಸರ್ಕಾರದ ಪರ ವಕೀಲರು ವಿಫಲರಾಗಿದ್ದು ಖುಲಾಸೆಗೊಳ್ಳಲು ಕಾರಣವಾಯಿತು’. </p>.<p>ನಾಲ್ವರ ವಿರುದ್ಧ ಕೊಲೆ, ಶಸ್ತ್ರಾಸ್ತ್ರ ಬಳಸಿ ಗಂಭೀರವಾಗಿ ಗಾಯಗೊಳಿಸುವುದು, ಕ್ರಿಮಿನಲ್ ಸಂಚು ಆರೋಪಗಳು ಸಾಬೀತಾಗಿವೆ.</p>.<p>ದೋಷಾರೋಪ ಪಟ್ಟಿ ಪ್ರಕಾರ, ಶಹಬಾಜ್ ಹುಸೇನ್ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ನಲ್ಲಿ ಸೈಬರ್ ಕೆಫೆ ಹೊಂದಿದ್ದಾನೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸದಸ್ಯ. ಈತನನ್ನೇ ಮೊದಲು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> ಜೈಪುರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿ ಬುಧವಾರ ತೀರ್ಪು ನೀಡಿದ್ದು, ಒಬ್ಬರನ್ನು ಖುಲಾಸೆಗೊಳಿಸಿದೆ.</p>.<p>ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯೂ ಸೇರಿ ವಿವಿಧ ಪ್ರಕರಣಗಳಡಿ ಈ ನಾಲ್ವರ ವಿರುದ್ಧದ ಆರೋಪಗಳು ಸಾಬೀತಾಗಿವೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಗುರುವಾರ ಪ್ರಕಟಿಸಲಿದೆ.</p>.<p>2008ರಲ್ಲಿ ಎಂಟು ಜನನಿಬಿಡ ಸ್ಥಳಗಳಲ್ಲಿ 25 ನಿಮಿಷಗಳ ಅಂತರದಲ್ಲಿ ಬಾಂಬ್ಗಳು ಸ್ಫೋಟಿಸಿದ್ದವು. 72 ಜನರು ಬಲಿಯಾಗಿದ್ದು, 170 ಜನರು ಗಾಯಗೊಂಡಿದ್ದರು. 11 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.</p>.<p>ಮೊಹಮ್ಮದ್ ಸೈಫ್, ಸರ್ವರ್ ಅಜಾಮಿ, ಸೈಫ್ ಉರ್ ರೆಹಮಾನ್, ಸಲ್ಮಾನ್ ಶಿಕ್ಷೆಗೆ ಗುರಿಯಾದವರು. 5ನೇ ಆರೋಪಿ ಶಹಬಾಜ್ ಹುಸೇನ್ವಿರುದ್ಧದ ಎಲ್ಲ ಎಂಟು ಆರೋಪಗಳಿಂದ ಕೋರ್ಟ್ ಖುಲಾಸೆಗೊಳಿಸಿತು.</p>.<p class="Subhead"><strong>ಖುಲಾಸೆ ಏಕೆ?:</strong> ಅಮಿಕಸ್ ಕ್ಯೂರಿ ಸುರೇಶ್ ವ್ಯಾಸ್ ಪ್ರಕಾರ, ‘ಶಹಬಾಜ್ ಹುಸೇನ್ ವಿರುದ್ಧ ದಾಖಲಿಸಿದ್ದ ಇ–ಮೇಲ್ ಕಳುಹಿಸಿದ್ದ, ಸ್ಫೋಟ ಪ್ರಕರಣದ ಹೊಣೆ ಹೊತ್ತಿದ್ದು ಸೇರಿದಂತೆ ಆರೋಪಗಳನ್ನು ಸಾಬೀತುಪಡಿಸಲು ಸರ್ಕಾರದ ಪರ ವಕೀಲರು ವಿಫಲರಾಗಿದ್ದು ಖುಲಾಸೆಗೊಳ್ಳಲು ಕಾರಣವಾಯಿತು’. </p>.<p>ನಾಲ್ವರ ವಿರುದ್ಧ ಕೊಲೆ, ಶಸ್ತ್ರಾಸ್ತ್ರ ಬಳಸಿ ಗಂಭೀರವಾಗಿ ಗಾಯಗೊಳಿಸುವುದು, ಕ್ರಿಮಿನಲ್ ಸಂಚು ಆರೋಪಗಳು ಸಾಬೀತಾಗಿವೆ.</p>.<p>ದೋಷಾರೋಪ ಪಟ್ಟಿ ಪ್ರಕಾರ, ಶಹಬಾಜ್ ಹುಸೇನ್ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ನಲ್ಲಿ ಸೈಬರ್ ಕೆಫೆ ಹೊಂದಿದ್ದಾನೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸದಸ್ಯ. ಈತನನ್ನೇ ಮೊದಲು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>