<p><strong>ನವದೆಹಲಿ:</strong> ಸಾಲಕ್ಕೆ ಸಿಲುಕಿ ನಲುಗಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ಅತ್ಯುತ್ತಮ ಲಾಭ ದೊರೆಯುವ ಮತ್ತು ಭಾರತೀಯರ ಕೈಯಲ್ಲಿಯೇ ಉಳಿಯುವ ರೀತಿಯಲ್ಲಿ ಖಾಸಗೀಕರಣ ಮಾಡಲಾಗುವುದು ಎಂದು ಲೋಕಸಭೆಗೆ ಸರ್ಕಾರ ತಿಳಿಸಿದೆ.</p>.<p>‘ಭಾರತದ ಬೇರೊಂದು ಸಂಸ್ಥೆಯು ಏರ್ ಇಂಡಿಯಾವನ್ನು ಖರೀದಿಸಲಿದೆಯೋ ಅಥವಾ ವಿಮಾನ ಯಾನ ಕ್ಷೇತ್ರ ಪ್ರವೇಶಿಸುವ ಹೊಸತೊಂದು ಸಂಸ್ಥೆ ಖರೀದಿಸಲಿದೆಯೋ ಎಂಬ ಬಗ್ಗೆ ಭವಿಷ್ಯ ನುಡಿಯಲಾಗದು. ಪರ್ಯಾಯ ವ್ಯವಸ್ಥೆ ರೂಪುಗೊಂಡ ತಕ್ಷಣವೇ ಈ ಬಗ್ಗೆ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.</p>.<p>ಶೂನ್ಯ ವೇಳೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.</p>.<p>‘ಏರ್ ಇಂಡಿಯಾ ಮಾರಾಟದ ಪ್ರಯತ್ನವನ್ನು ಕಳೆದ ಮೇಯಲ್ಲಿಯೇ ನಡೆಸಲಾಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ಈ ಪ್ರಕ್ರಿಯೆ ಆರಂಭಿಸುವಾಗ ನಾವು ಕೆಲವು ಪಾಠಗಳನ್ನು ಕಲಿತಿದ್ದೇವೆ. ಶೇ 24ರಷ್ಟು ಪಾಲನ್ನು ಸರ್ಕಾರ ಉಳಿಸಿಕೊಳ್ಳುವುದು ಅಥವಾ ಇಂತಹ ಬೇರೆ ಕೆಲವು ಷರತ್ತುಗಳು ಕಳೆದ ಬಾರಿ ಇದ್ದವು. ಬಹುಶಃ ಈ ಬಾರಿ ಅಂತಹ ತಪ್ಪುಗಳನ್ನು ಮಾಡುವುದಿಲ್ಲ’ ಎಂದು ಅವರು ತಿಳಿಸಿದರು.</p>.<p>‘ಈಗ, ಜೆಟ್ ಏರ್ವೇಸ್ ಸ್ಥಗಿತಗೊಂಡಿರುವುದರಿಂದ ಏರ್ ಇಂಡಿಯಾವನ್ನು ಖರೀದಿಸುವುದು ಬಹಳ ಆಕರ್ಷಕವಾದ ಹೂಡಿಕೆಯಾಗಿದೆ. ಸಂಸ್ಥೆಯನ್ನು ಖರೀದಿಸಲು ಆಸಕ್ತಿ ಇರಬಹುದಾದ ಸಂಸ್ಥೆಗಳ ಪಟ್ಟಿಯನ್ನು ಸರ್ಕಾರ ತಯಾರಿಸುತ್ತಿದೆ. ಏರ್ ಇಂಡಿಯಾ ಮಾರಾಟದ ವಿಚಾರ ಬಹಳ ಸಮಯದಿಂದ ಇದೆ. ಈ ಬಾರಿ ಸರ್ಕಾರ ಅದರಲ್ಲಿ ಯಶಸ್ವಿಯಾಗಲಿದೆ’ ಎಂಬ ವಿಶ್ವಾಸವನ್ನು ಪುರಿ ವ್ಯಕ್ತಪಡಿಸಿದರು.</p>.<p>‘125 ವಿಮಾನಗಳನ್ನು ಹೊಂದಿರುವ ಏರ್ಇಂಡಿಯಾ ಅತ್ಯುತ್ತಮವಾದ ಆಸ್ತಿ. ಈಗ ಅದರ ವ್ಯವಹಾರ ಕೂಡ ಅತ್ಯುತ್ತಮವಾಗಿದೆ. ಆದರೆ, ಭಾರಿ ಸಾಲದ ಹೊರೆಯಿಂದಾಗಿ ಅದನ್ನು ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರವು ಬಹಳ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿದೆ ಎಂದು ವಿವರಿಸಿದರು.</p>.<p>₹78 ಸಾವಿರ ಕೋಟಿ ಸಾಲ: ಏರ್ ಇಂಡಿಯಾದ ಈಗಿನ ಸ್ಥಿತಿ ಉತ್ತಮವಾಗಿದೆ. 40 ಅಂತರರಾಷ್ಟ್ರೀಯ ಮತ್ತು 80 ದೇಶೀಯ ತಾಣಗಳಿಗೆ ವಿಮಾನ ಹಾರಾಟ ನಡೆಸುತ್ತಿದೆ. ಲಾಭದಾಯಕವಾಗಿಯೂ ಇದೆ. ಆದರೆ, ಸಾಲದ ಹೊರೆಯೇ ದೊಡ್ಡ ಚಿಂತೆಯಾಗಿದೆ.</p>.<p>ಏರ್ ಇಂಡಿಯಾಕ್ಕೆ ₹58 ಸಾವಿರ ಕೋಟಿ ಸಾಲ ಇದೆ ಎಂಬುದು ಮೇಲ್ನೋಟದ ಲೆಕ್ಕಾಚಾರ. ವಿವರವಾಗಿ ಪರಿಶೀಲಿಸಿದರೆ ಇನ್ನೂ ಒಂದು ₹20 ಸಾವಿರ ಕೋಟಿ ಹೆಚ್ಚಾಗಬಹುದು ಎಂದು ಸರ್ಕಾರ ಹೇಳಿದೆ.</p>.<p><strong>‘ಮೋದಿ ದೇಶವನ್ನೇ ಮಾರಲಿದ್ದಾರೆ’</strong></p>.<p><strong></strong><br />ರೈಲ್ವೆ ಖಾಸಗೀಕರಣವನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ. ರೈಲ್ವೆಯ ಆಸ್ತಿಯನ್ನು ಕೇಂದ್ರ ಸರ್ಕಾರವು ಮಾರಲು ಹೊರ<br />ಟಿದೆ. ಜನರಿಗೆ ಕನಸುಗಳನ್ನು ಮಾರುವ ಬಿಜೆಪಿ, ತಳಮಟ್ಟದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದೆ.ನಾಗರಿಕ ವಿಮಾನಯಾನ ಸಚಿವರು ಏರ್ಇಂಡಿಯಾ ಮಾರಲು ಹೊರಟಿದ್ದಾರೆ.</p>.<p>ರೈಲ್ವೆಯ ಆಸ್ತಿಯನ್ನು ರೈಲ್ವೆ ಸಚಿವರು ಮಾರಲು ಹೊರಟಿದ್ದಾರೆ. ಮುಂದೊಂದು ದಿನ ದೇಶವನ್ನೇ ಮೋದಿ ಅವರು ಮಾರಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು ಆರೋಪಿಸಿದರು.</p>.<p><strong>‘ಬುಲೆಟ್ ರೈಲು ಸರಿಹೋಗಲ್ಲ’</strong></p>.<p><strong></strong><br />ಬುಲೆಟ್ ರೈಲು ಪರಿಕಲ್ಪನೆಯು ಭಾರತಕ್ಕೆ ಸರಿಹೊಂದಲ್ಲ. ಇದು ಸರ್ಕಾರ ಕೊಟ್ಟಿರುವ ಹುಸಿ ಭರವಸೆ ಎಂದು ಲೋಕಸಭೆಯಲ್ಲಿ ಟಿಎಂಸಿ ಪ್ರತಿಪಾದಿಸಿದೆ.</p>.<p>ಸರ್ಕಾರವು ಹೈಸ್ಪೀಡ್ ರೈಲನ್ನು ಬುಲೆಟ್ ರೈಲು ಎಂದು ಹೇಳುತ್ತಿದೆ ಎಂದು ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ ಹೇಳಿದರು.</p>.<p>ನೂರು ವರ್ಷಗಳಿಗೂ ಹಳೆಯದಾದ ರೈಲ್ವೆ ಸೇತುವೆಗಳು ಬಹಳಷ್ಟಿವೆ. ಇದು ಪ್ರಯಾಣಿಕರ ಸುರಕ್ಷತೆಯ ವಿಚಾರ. ಹಾಗಾಗಿ, ಇದನ್ನು ಪರಿಶೀಲಿಸುವತ್ತ ಸರ್ಕಾರ ಗಮನ ಹರಿಸಬೇಕು. ಅದಲ್ಲದೆ, ಗ್ಯಾಂಗ್ಮನ್ ಮತ್ತು ಚಾಲಕರ ಕೊರತೆಯೂ ತೀವ್ರವಾಗಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಾಲಕ್ಕೆ ಸಿಲುಕಿ ನಲುಗಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ಅತ್ಯುತ್ತಮ ಲಾಭ ದೊರೆಯುವ ಮತ್ತು ಭಾರತೀಯರ ಕೈಯಲ್ಲಿಯೇ ಉಳಿಯುವ ರೀತಿಯಲ್ಲಿ ಖಾಸಗೀಕರಣ ಮಾಡಲಾಗುವುದು ಎಂದು ಲೋಕಸಭೆಗೆ ಸರ್ಕಾರ ತಿಳಿಸಿದೆ.</p>.<p>‘ಭಾರತದ ಬೇರೊಂದು ಸಂಸ್ಥೆಯು ಏರ್ ಇಂಡಿಯಾವನ್ನು ಖರೀದಿಸಲಿದೆಯೋ ಅಥವಾ ವಿಮಾನ ಯಾನ ಕ್ಷೇತ್ರ ಪ್ರವೇಶಿಸುವ ಹೊಸತೊಂದು ಸಂಸ್ಥೆ ಖರೀದಿಸಲಿದೆಯೋ ಎಂಬ ಬಗ್ಗೆ ಭವಿಷ್ಯ ನುಡಿಯಲಾಗದು. ಪರ್ಯಾಯ ವ್ಯವಸ್ಥೆ ರೂಪುಗೊಂಡ ತಕ್ಷಣವೇ ಈ ಬಗ್ಗೆ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.</p>.<p>ಶೂನ್ಯ ವೇಳೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.</p>.<p>‘ಏರ್ ಇಂಡಿಯಾ ಮಾರಾಟದ ಪ್ರಯತ್ನವನ್ನು ಕಳೆದ ಮೇಯಲ್ಲಿಯೇ ನಡೆಸಲಾಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ಈ ಪ್ರಕ್ರಿಯೆ ಆರಂಭಿಸುವಾಗ ನಾವು ಕೆಲವು ಪಾಠಗಳನ್ನು ಕಲಿತಿದ್ದೇವೆ. ಶೇ 24ರಷ್ಟು ಪಾಲನ್ನು ಸರ್ಕಾರ ಉಳಿಸಿಕೊಳ್ಳುವುದು ಅಥವಾ ಇಂತಹ ಬೇರೆ ಕೆಲವು ಷರತ್ತುಗಳು ಕಳೆದ ಬಾರಿ ಇದ್ದವು. ಬಹುಶಃ ಈ ಬಾರಿ ಅಂತಹ ತಪ್ಪುಗಳನ್ನು ಮಾಡುವುದಿಲ್ಲ’ ಎಂದು ಅವರು ತಿಳಿಸಿದರು.</p>.<p>‘ಈಗ, ಜೆಟ್ ಏರ್ವೇಸ್ ಸ್ಥಗಿತಗೊಂಡಿರುವುದರಿಂದ ಏರ್ ಇಂಡಿಯಾವನ್ನು ಖರೀದಿಸುವುದು ಬಹಳ ಆಕರ್ಷಕವಾದ ಹೂಡಿಕೆಯಾಗಿದೆ. ಸಂಸ್ಥೆಯನ್ನು ಖರೀದಿಸಲು ಆಸಕ್ತಿ ಇರಬಹುದಾದ ಸಂಸ್ಥೆಗಳ ಪಟ್ಟಿಯನ್ನು ಸರ್ಕಾರ ತಯಾರಿಸುತ್ತಿದೆ. ಏರ್ ಇಂಡಿಯಾ ಮಾರಾಟದ ವಿಚಾರ ಬಹಳ ಸಮಯದಿಂದ ಇದೆ. ಈ ಬಾರಿ ಸರ್ಕಾರ ಅದರಲ್ಲಿ ಯಶಸ್ವಿಯಾಗಲಿದೆ’ ಎಂಬ ವಿಶ್ವಾಸವನ್ನು ಪುರಿ ವ್ಯಕ್ತಪಡಿಸಿದರು.</p>.<p>‘125 ವಿಮಾನಗಳನ್ನು ಹೊಂದಿರುವ ಏರ್ಇಂಡಿಯಾ ಅತ್ಯುತ್ತಮವಾದ ಆಸ್ತಿ. ಈಗ ಅದರ ವ್ಯವಹಾರ ಕೂಡ ಅತ್ಯುತ್ತಮವಾಗಿದೆ. ಆದರೆ, ಭಾರಿ ಸಾಲದ ಹೊರೆಯಿಂದಾಗಿ ಅದನ್ನು ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರವು ಬಹಳ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿದೆ ಎಂದು ವಿವರಿಸಿದರು.</p>.<p>₹78 ಸಾವಿರ ಕೋಟಿ ಸಾಲ: ಏರ್ ಇಂಡಿಯಾದ ಈಗಿನ ಸ್ಥಿತಿ ಉತ್ತಮವಾಗಿದೆ. 40 ಅಂತರರಾಷ್ಟ್ರೀಯ ಮತ್ತು 80 ದೇಶೀಯ ತಾಣಗಳಿಗೆ ವಿಮಾನ ಹಾರಾಟ ನಡೆಸುತ್ತಿದೆ. ಲಾಭದಾಯಕವಾಗಿಯೂ ಇದೆ. ಆದರೆ, ಸಾಲದ ಹೊರೆಯೇ ದೊಡ್ಡ ಚಿಂತೆಯಾಗಿದೆ.</p>.<p>ಏರ್ ಇಂಡಿಯಾಕ್ಕೆ ₹58 ಸಾವಿರ ಕೋಟಿ ಸಾಲ ಇದೆ ಎಂಬುದು ಮೇಲ್ನೋಟದ ಲೆಕ್ಕಾಚಾರ. ವಿವರವಾಗಿ ಪರಿಶೀಲಿಸಿದರೆ ಇನ್ನೂ ಒಂದು ₹20 ಸಾವಿರ ಕೋಟಿ ಹೆಚ್ಚಾಗಬಹುದು ಎಂದು ಸರ್ಕಾರ ಹೇಳಿದೆ.</p>.<p><strong>‘ಮೋದಿ ದೇಶವನ್ನೇ ಮಾರಲಿದ್ದಾರೆ’</strong></p>.<p><strong></strong><br />ರೈಲ್ವೆ ಖಾಸಗೀಕರಣವನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ. ರೈಲ್ವೆಯ ಆಸ್ತಿಯನ್ನು ಕೇಂದ್ರ ಸರ್ಕಾರವು ಮಾರಲು ಹೊರ<br />ಟಿದೆ. ಜನರಿಗೆ ಕನಸುಗಳನ್ನು ಮಾರುವ ಬಿಜೆಪಿ, ತಳಮಟ್ಟದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದೆ.ನಾಗರಿಕ ವಿಮಾನಯಾನ ಸಚಿವರು ಏರ್ಇಂಡಿಯಾ ಮಾರಲು ಹೊರಟಿದ್ದಾರೆ.</p>.<p>ರೈಲ್ವೆಯ ಆಸ್ತಿಯನ್ನು ರೈಲ್ವೆ ಸಚಿವರು ಮಾರಲು ಹೊರಟಿದ್ದಾರೆ. ಮುಂದೊಂದು ದಿನ ದೇಶವನ್ನೇ ಮೋದಿ ಅವರು ಮಾರಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು ಆರೋಪಿಸಿದರು.</p>.<p><strong>‘ಬುಲೆಟ್ ರೈಲು ಸರಿಹೋಗಲ್ಲ’</strong></p>.<p><strong></strong><br />ಬುಲೆಟ್ ರೈಲು ಪರಿಕಲ್ಪನೆಯು ಭಾರತಕ್ಕೆ ಸರಿಹೊಂದಲ್ಲ. ಇದು ಸರ್ಕಾರ ಕೊಟ್ಟಿರುವ ಹುಸಿ ಭರವಸೆ ಎಂದು ಲೋಕಸಭೆಯಲ್ಲಿ ಟಿಎಂಸಿ ಪ್ರತಿಪಾದಿಸಿದೆ.</p>.<p>ಸರ್ಕಾರವು ಹೈಸ್ಪೀಡ್ ರೈಲನ್ನು ಬುಲೆಟ್ ರೈಲು ಎಂದು ಹೇಳುತ್ತಿದೆ ಎಂದು ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ ಹೇಳಿದರು.</p>.<p>ನೂರು ವರ್ಷಗಳಿಗೂ ಹಳೆಯದಾದ ರೈಲ್ವೆ ಸೇತುವೆಗಳು ಬಹಳಷ್ಟಿವೆ. ಇದು ಪ್ರಯಾಣಿಕರ ಸುರಕ್ಷತೆಯ ವಿಚಾರ. ಹಾಗಾಗಿ, ಇದನ್ನು ಪರಿಶೀಲಿಸುವತ್ತ ಸರ್ಕಾರ ಗಮನ ಹರಿಸಬೇಕು. ಅದಲ್ಲದೆ, ಗ್ಯಾಂಗ್ಮನ್ ಮತ್ತು ಚಾಲಕರ ಕೊರತೆಯೂ ತೀವ್ರವಾಗಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>