ಉಗ್ರ ದಾಳಿ ಭೀತಿ ಹಿನ್ನೆಲೆಯಲ್ಲಿ ಶುಕ್ರವಾರ ಅಮರನಾಥ ಯಾತ್ರೆ ರದ್ದುಗೊಳಿಸಿದ್ದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಾಜ್ಯ ಬಿಟ್ಟು ವಾಪಸ್ ತೆರಳುವಂತೆ ಯಾತ್ರಿಕರಿಗೆ ಸೂಚಿಸಿತ್ತು. ಕಳೆದರೆಡು ದಿನಗಳಲ್ಲಿ ಸಾವಿರಾರು ಯಾತ್ರಿಕರು ರಾಜ್ಯದಿಂದ ವಾಪಸ್ ತೆರಳಿದ್ದಾರೆ. ವಿದೇಶಿಯರೂ ಸೇರಿದಂತೆಅಂದಾಜು 20,000 ಪ್ರವಾಸಿಗರ ಪೈಕಿ ಶೇ 95ರಷ್ಟು ಮಂದಿ ಶುಕ್ರವಾರದ ಬಳಿಕ ರಾಜ್ಯದಿಂದ ವಾಪಸ್ ತೆರಳಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿಎಎನ್ಐಸುದ್ದಿಸಂಸ್ಥೆ ವರದಿ ಮಾಡಿದೆ.