ಅಂಪನ್ ಚಂಡಮಾರುತವು ಸೋಮವಾರ ತೀವ್ರ ಚಂಡಮಾರುತದ (ಸೂಪರ್ ಸೈಕ್ಲೋನ್) ಸ್ವರೂಪ ಪಡೆದಿತ್ತು. ಹೀಗಾಗಿ ಆಂಧ್ರ
ಪ್ರದೇಶದ ಕರಾವಳಿ ಮತ್ತು ಒಡಿಶಾದ ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇತ್ತು. ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಯಿತು. ಹೀಗಾಗಿ ಒಡಿಶಾದ ಕೆಲವು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಯಿತು. ಹಲವೆಡೆ ತೀವ್ರ ಬಿರುಗಾಳಿ ಬೀಸಿತು. ಪಶ್ಚಿಮ ಬಂಗಾಳದ ಹಲವೆಡೆಯೂ ಭಾರಿ ಮಳೆಯಾಯಿತು.