ಮಾಜಿ ಪತ್ರಕರ್ತ ನಿತಿನ್ ಗೋಖಲೆ ಬರೆದಿರುವ ‘ಆರ್.ಎನ್. ಕಾವ್: ಜಂಟಲ್ಮನ್ ಸ್ಪೈಮಾಸ್ಟರ್’ ಪುಸ್ತಕವನ್ನು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ಬೇಹುಗಾರಿಕೆ ಎಂದಾಕ್ಷಣ ಕಾಲ್ಪನಿಕ ಲೋಕದಲ್ಲಿ ಮುಳುಗುತ್ತೇವೆ. ಬೇಹುಗಾರಿಕೆ ಎನ್ನುವುದು ಕಂಡರಿಯದ ಮತ್ತು ಕೇಳರಿಯದ ವಿಷಯಗಳನ್ನು ಸಂಗ್ರಹಿಸುವುದು ಹಾಗೂ ತೆರೆಯ ಹಿಂದಿನ ಅಪಾರ ಮಾಹಿತಿಯನ್ನು ವಿಶ್ಲೇಷಿಸುವುದಾಗಿದೆ’ ಎಂದರು.