ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕೆ ಜೇಮ್ಸ್‌ ಬಾಂಡ್‌ ರೀತಿ ಅಲ್ಲ: ನರವಾಣೆ

Last Updated 21 ಡಿಸೆಂಬರ್ 2019, 19:55 IST
ಅಕ್ಷರ ಗಾತ್ರ

ಪುಣೆ: ‘ನಿಜವಾದ ಬೇಹುಗಾರಿಕೆ ಎನ್ನುವುದು ಗ್ಲಾಮರಸ್‌ ಲೋಕದ ಜೇಮ್ಸ್‌ ಬಾಂಡ್‌ ರೀತಿ ಅಲ್ಲ’ ಎಂದು ಮುಂದಿನ ಸೇನಾ ಮುಖ್ಯಸ್ಥರಾಗಿ ನಿಯೋಜನೆಗೊಂಡಿರುವ ಲೆಫ್ಟಿನೆಂಟ್‌ ಜನರಲ್ ಮನೋಜ್ ಮುಕುಂದ್ ನರವಾಣೆವಿಶ್ಲೇಷಿಸಿದ್ದಾರೆ.

ಮಾಜಿ ಪತ್ರಕರ್ತ ನಿತಿನ್‌ ಗೋಖಲೆ ಬರೆದಿರುವ ‘ಆರ್‌.ಎನ್‌. ಕಾವ್‌: ಜಂಟಲ್‌ಮನ್‌ ಸ್ಪೈಮಾಸ್ಟರ್‌’ ಪುಸ್ತಕವನ್ನು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ಬೇಹುಗಾರಿಕೆ ಎಂದಾಕ್ಷಣ ಕಾಲ್ಪನಿಕ ಲೋಕದಲ್ಲಿ ಮುಳುಗುತ್ತೇವೆ. ಬೇಹುಗಾರಿಕೆ ಎನ್ನುವುದು ಕಂಡರಿಯದ ಮತ್ತು ಕೇಳರಿಯದ ವಿಷಯಗಳನ್ನು ಸಂಗ್ರಹಿಸುವುದು ಹಾಗೂ ತೆರೆಯ ಹಿಂದಿನ ಅಪಾರ ಮಾಹಿತಿಯನ್ನು ವಿಶ್ಲೇಷಿಸುವುದಾಗಿದೆ’ ಎಂದರು.

‘ಸೇನೆಯ ಯಶಸ್ವಿ ಕಾರ್ಯಾಚರಣೆಗೆ ಬೇಹುಗಾರಿಕೆ ಅತ್ಯಂತ ಮಹತ್ವ ಪಡೆದಿದೆ. ಯಾವುದೇ ಕಾರ್ಯಾಚರಣೆ ಆರಂಭದಲ್ಲಿ ಬೇಹುಗಾರಿಕೆಯಿಂದ ಶತ್ರುಗಳ ಬಗ್ಗೆ ಯಾವ ರೀತಿ ಮಾಹಿತಿ ದೊರೆತಿದೆ ಎನ್ನುವ ವಿಷಯ ಪ್ರಸ್ತಾಪವಾಗುತ್ತದೆ’ ಎಂದು ತಿಳಿಸಿದರು.

‘ವಿವಿಧ ಬೇಹುಗಾರಿಕೆ ಇಲಾಖೆಗಳ ಬೆಂಬಲವಿಲ್ಲದೆಯೇ ಯಾವುದೇ ಸೇನಾ ಕಾರ್ಯಾಚರಣೆ ಯಶಸ್ವಿ
ಯಾಗಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT