‘ಸೇನೆಯಲ್ಲಿ ಯೋಧನಾಗಿರುವ ಜಿತೇಂದ್ರನನ್ನು ನಾವು ಬಂಧಿಸಿದ್ದೇವೆ. ಭಾನುವಾರ ಮಧ್ಯರಾತ್ರಿ 12:50ಕ್ಕೆ ಜಿತೇಂದ್ರನನ್ನು ಸೇನೆ ನಮ್ಮ ವಶಕ್ಕೆ ಒಪ್ಪಿಸಿತು. ಪ್ರಾಥಮಿಕ ವಿಚಾರಣೆ ಮುಗಿದಿದೆ. ಅವನನ್ನು ಬುಲಂದ್ಶಹರ್ಗೆ ಕಳಿಸುತ್ತೇವೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ’ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಮೀರತ್ನಲ್ಲಿ ಹೇಳಿದರು.