ಶಬರಿಮಲೆ ಸನ್ನಿಧಾನಂ ಸಮೀಪದ ಮರಕ್ಕುಟ್ಟಂ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ 1.30ರ ವೇಳೆಗೆ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ವಾಪಸ್ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಪೊಲೀಸರ ಮನವಿಗೆ ಸೊಪ್ಪುಹಾಕದ ಅವರು, ಶನಿವಾರ ಬೆಳಿಗ್ಗೆ ದರ್ಶನ ಮಾಡದ ಹೊರತು ತಾವು ಹಿಂದಿರುಗುವುದಿಲ್ಲ ಎಂದು ಹಠ ಮಾಡಿದ್ದಾರೆ.