ನವದೆಹಲಿ:ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದಕೇಜ್ರಿವಾಲ್ಗೆವ್ಯಕ್ತಿಯೊಬ್ಬ ಹಲ್ಲೆ ಮಾಡಿರುವಘಟನೆಗೆ ಸಂಬಂಧಿಸಿದಂತೆ ಈ ಕೃತ್ಯವನ್ನು ಬಿಜೆಪಿ ನಡೆಸಿದೆ ಎಂದು ಎಎಪಿ ಆರೋಪಿಸಿದೆ.
ಇಲ್ಲಿನ ಮೋತಿ ನಗರ ಪ್ರದೇಶದಲ್ಲಿ ಶನಿವಾರ ಸಂಜೆ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಎಂಕೇಜ್ರಿವಾಲ್ ನಿಂತಿದ್ದ ಜೀಪಿನ ಮೇಲೇರಿಅವರತ್ತ ನುಗ್ಗಿರುವ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದಾನೆ.
#WATCH: A man slaps Delhi Chief Minister Arvind Kejriwal during his roadshow in Moti Nagar area. (Note: Abusive language) pic.twitter.com/laDndqOSL4
— ANI (@ANI) May 4, 2019
ಚುನಾವಣಾ ಕಣದಲ್ಲಿ ಎಎಪಿಯನ್ನು ಸೋಲಿಸಲಾಗದ ಬಿಜೆಪಿ,ಅರವಿಂದ ಕೇಜ್ರಿವಾಲ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದೆ ಎಂದು ಎಎಪಿ ಶಾಸಕ ಸೌರಬ್ ಭಾರಾಧ್ವಜ್ ತಿಳಿಸಿದ್ದಾರೆ.
ನಿಮಗೆ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಸಾಧ್ಯವೆ? ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೋದಿ ಮತ್ತು ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಇಂತಹ ಹೇಡಿ ಕೃತ್ಯವನ್ನು ನಡೆಸುತ್ತಿದೆ ಎಂದು ಮನೀಶ್ ಟ್ವೀಟ್ ಮಾಡಿದ್ದಾರೆ.
ಸೋಲು ಭಯದಿಂದ ಬಿಜೆಪಿ ಇಂತಹ ಕೆಲಸಗಳನ್ನು ಮಾಡಿಸುತ್ತಿದೆ. ಬಿಜೆಪಿ ದೇಶದಾದ್ಯಂತ ಸೋಲುವುದು ಖಚಿತ, ಮೋದಿ ಮನೆಗೆ ವಾಪಾಸ್ ಹೋಗಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
The @ArvindKejriwal incident in Delhi and the malicious spin on a silly video targeting @MamataOfficial in Bengal prove that BJP has already LOST. They are desperately creating incidents to try and find 'game-changers'. People have already changed the game! Modi is OUT: Derek
— All India Trinamool Congress (@AITCofficial) May 4, 2019
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮೇಲಿನ ದಾಳಿ ಬಿಜೆಪಿಯ ಹತಾಶೆಯನ್ನು ಎತ್ತಿ ತೋರಿಸುತ್ತದೆ ಎಂದು ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Assault on Kejriwal reflects desperation of BJP: N Chandrababu Naidu
— ANI Digital (@ani_digital) May 4, 2019
Read @ANI story | https://t.co/924I8bRMit pic.twitter.com/sDmDoT45kn
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.