‘ಹೊರಗಿನಿಂದ ಒಂದು ಲಕ್ಷ ಜನ ಬರುತ್ತಿರುವುದು ನಮ್ಮಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸರು ಸರಿಯಾದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸದಿರುವುದು ಭೀತಿಗೆ ಕಾರಣವಾಗಿದ್ದು, ಅಂದು ನಾವು ಊರನ್ನು ತೊರೆಯುವ ಯೋಚನೆಯಲ್ಲಿದ್ದೇವೆ’ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಇವರು,ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದದ ಹಿರಿಯ ಅರ್ಜಿದಾರರಾಗಿರುವ ಹಾಶಿಂ ಅನ್ಸಾರಿಯವರ ಮಗ.